|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ಭಾವ‘ವು ಕೇವಲ ಒಬ್ಬ ಸಾಹಿತಿಯ ಆತ್ಮಕಥವಲ್ಲ, ಗತಿಸಿಹೋದ ಕಾಲ ಒಂದರ ಪ್ರತಿಧ್ವನಿ ಕೂಡ. ಏಕೆಂದರೆ ಮಾಸ್ತಿಯವರ ಜನನ - ಬಾಲ್ಯ - ಕೌಮರ-ಯೌವನಗಳ ಕಾಲ ಮೈಸೂರು ರಾಜ ಮನೆತನಸ ಆಳ್ವಿಕೆಯ ಉಚ್ಛ್ರಾಯದ ಸಮಯ. ಭಾರತವರ್ಷದ ಸ್ವಾತಂತ್ರ್ಯ ಸಂಗ್ರಾಮದ ಮುನ್ನಡೆ, ಅದಕ್ಕಾಗಿ ಹೋರಾಡಿದ ಧುರೀಣದ ಭಾಷಣಗಳು ಇತ್ಯಾದಿಗಳನ್ನು ಅವರು ಕಂಡು ಕೇಳಿದ್ದು ಪೌಢ ವಿದ್ಯಾರ್ಥ ದಿನಗಳಲ್ಲಿ. ವೃತ್ತಿಜೀವನವು ಕ್ರಮಿಸಿದ್ದು ರಾಜರ ಆಳ್ವಿಕೆ ಅವಸರ್ಪಣಿಯಲ್ಲಿ‘ಶ್ರೀನಿವಾಸ‘ರ ಸಾಹಿತ್ಯ ಕೃಷಿ ನಡೆದದ್ದು ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮನ್ನೇ ಮುಡುಪಿಟ್ಟುಕೊಂಡು ಅನೇಕ ಗಣ್ಯ ಸಮಾನಮಸ್ಕರ ಮಧ್ಯೆ. ಸಾಹಿತ್ಯ ಪರಿಷತ್ತಿನ ಕೆಲಸ, ಕರ್ನಾಟಕ ಏಕೀಕರಣ ಸಂದರ್ಭದ ಕರ್ತವ್ಯ ನಿರ್ವಹಣೆ, ಸ್ವಂತ ಕೃತಿ ನಿರ್ಮಾಣ, ‘ಜೀವನ‘ ಪತ್ರಿಕೆ ಸಂಪಾದನ ಕಾರ್ಯ ನಡೆಸುತ್ತ - ಈ ಎಲ್ಲವುಗಳ ನಡುವೆ ಸ್ವಾತಂತ್ರ ಭಾರತ ಉದಯ, ನಾಡ ವೈಜ್ಞಾನಿಕ - ಕೈಗಾರಿಕ ಕ್ಷೇತ್ರಗಳಲ್ಲಿನ ಮುನ್ನಡೆ, ಭಾಷಾವಿವಾದ ಮುಂತಾದ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿದ್ಯಮಾನಗಳಿಗೆ ಕನ್ನಡದ ಈ ನುಡಿಪೂಜಾರಿ ಸಾಕ್ಷಿಯಾಗಿದ್ದರು.
|
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.
|
|
| |
|
|
|
|
|
|
|
|
|