|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಲವಾರು ಮನೋವಿಜ್ಞಾನಿಗಳು ಮನುಷ್ಯನ ಬುದ್ಧಿಶಕ್ತಿಯ ಬಗೆಗೆ ಸಂಶೋಧನೆ ಮಾಡಿದ್ದಾರೆ. ಅವರಲ್ಲಿ ಹೋವರ್ಡ್ ಗಾಡ್ರ್ನರ್ ಬುದ್ಧಿಶಕ್ತಿಯು ಒಂದೇ ಅಲ್ಲ. ಬಹುವಿಧ ಬುದ್ಧಿಶಕ್ತಿಗಳಿವೆ ಎಂದು ಪ್ರತಿಪಾದಿಸಿ ಮನೋವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿದ್ದಾನೆ. ಈ ಬಗ್ಗೆ ಹಲವು ಗ್ರಂಥಗಳನ್ನೂ ಬರೆದು ಸುಮಾರು ಒಂಬತ್ತು ರೀತಿಯ ಬುದ್ಧಿಶಕ್ತಿಗಳಿವೆಯೆಂದು ಮನೋವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾನೆ. ಅದರ ವಿವರಗಳೆಲ್ಲವೂ ಈ ಕೃತಿಯಲ್ಲಿ ಲಭ್ಯವಿವೆ. ಬುದ್ಧಿಶಕ್ತಿ ಮನುಷ್ಯನಿಗೆ ಮಾತ್ರ ಸೀಮಿತವೆಂದು ಭಾವಿಸಿದ ಸನ್ನಿವೇಶದಲ್ಲಿ ಎಲ್ಲರ ಬುದ್ಧಿಮಟ್ಟವೂ ಒಂದೇ ಏಕಾಗಿಲ್ಲ ಎಂಬಂತಹ ಪ್ರಶ್ನೆಗಳಿಗೂ ಉತ್ತರಿಸಿದ ಗಾಡ್ರ್ನರ್ ವಿವಿಧ ದೇಶಗಳಿಗೆ ಭೇಟಿ ನೀಡಿ ತನ್ನ ಸಿದ್ಧಾಂತದ ಪ್ರಚಾರ ಹಾಗೂ ಪ್ರತಿಪಾದನೆಗಳಿಗೆ ಎದುರಾದ ಪ್ರಶ್ನೆಗಳಿಗೆಲ್ಲ ಸಮರ್ಪಕ ಉತ್ತರ ನೀಡಿ ಈ ಸಿದ್ಧಾಂತವನ್ನು ಸ್ವಾಗತಿಸುವಂತೆ ಮಾಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಈ ಕುರಿತು ವಿವರವಾದ ಮಾಹಿತಿ ಕೃತಿಯ ಒಳಪುಟಗಳಲ್ಲಿ ದಾಖಲಾಗಿದೆ.
|
ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|