|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
96 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788195113149 |
ಕೋಡ್ |
: |
1130922 |
ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ. ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ, ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯಕುತೂಹಲಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಈ ಕಂಬಾರರ dynamism ಒಂದು ಅಪರೂಪದ ದೊಡ್ಡತನದ ಕುರುಹು ಅಂತ ಹೇಳಬಹುದಲ್ಲವೇ?
ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ. ಆ ತುಷ್ಟಿಯಲ್ಲಿ ಭಾಗಿಗಳಾಗುತ್ತೇವೆ . ಕಾವ್ಯಸಂವೇದನೆ ಹೇಗೆ ಬೆಳೆಯುತ್ತದೆ, ಹಬ್ಬುತ್ತದೆ. ಕೃತಾರ್ಥವಾಗುತ್ತದೆ. ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.
ರಾಜೀವ ತಾರಾನಾಥ
|
ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ `ಕರ್ನಾಟಕ ವಿವಿ`ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿದ್ಧಿ-ಸಾಧನೆಗಳನ್ನು ಎತ್ತಿ ಹಿಡಿದಿರುವ ಹಾಗೂ ಅದರ ಪ್ರತೀಕವಾಗಿರುವ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ಕಾಣಿಕೆಯಾಗಿತ್ತಿರುವುದು ಮಾತ್ರವಲ್ಲದೆ, ತಮ್ಮ ಆಯ್ಕೆಯ ಈ ಎಲ್ಲ ಕ್ಷೇತ್ರಗಳಿಗೆ ಹೊಸ ಆಯಾಮವನ್ನು ಜೋಡಿಸಿದ ಹಿರಿಮೆಯೂ ಅವರದಾಗಿದೆ. ತಮ್ಮ ಸಾಹಿತ್ಯ ಕೃತಿಗಳಿಗಾಗಿ ಹಲವಾರು ರ್ಟ್ರಾಯ ಪ್ರಶಸ್ತಿಗಳನ್ನು ಗಳಿಸಿದ ಅವರು ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದಾಗಲೂ ಅದೇ ವಿಕ್ರಮವನ್ನು ಮೆರೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡ ನಾಡಿಗೇ ಹೆಮ್ಮೆಯನ್ನು ತರುವಂಥ ಸಂಗತಿಗಳಾಗಿವೆ.
|
|
| |
|
|
|
|
|
|
|
|
|