|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಮಕ್ಕಳಿಗೆಂದು ಬರೆದ ನಾಟಕ. ಶಾಲೆಯ ಏಕತಾನತೆಯಿಂದ ಬೇಸತ್ತಿದ್ದ ಮಕ್ಕಳು ನಳನಳಿಸುವ ‘ಹಿಡಿಂಬನ ತೋಟ’ ಕಂಡು ಅಚ್ಚರಿಗೊಂಡು ಅಲ್ಲಿ ನುಸುಳಿ ಹಾಡುತ್ತಾ - ಕುಣಿಯುತ್ತಾ ನಲಿಯುತ್ತಾರೆ. ಜೊತೆಗೆ ಹಿಡಿಂಬನ ತಂಗಿ ‘ಹಿಡಿಂಬೆ’ಯೂ ಸೇರಿಕೊಳ್ಳುತ್ತಾಳೆ. ಆದರೆ ಊರಿನಿಂದ ಹಿಂದಿರುಗಿದ ಹಿಡಿಂಬ ತೋಟಕ್ಕೆ ಮಕ್ಕಳು ಬಂದದ್ದನ್ನು ಕಂಡು ಕೋಪಗೊಳ್ಳುತ್ತಾನೆ. ಪರಿಣಾಮ, ತೋಟಕ್ಕೆ ಯಾರನ್ನೂ ಒಳಸೇರಿಸುವುದಿಲ್ಲ ‘ವಸಂತ ಋತು’ ಕೂಡ ಹೆದರಿ ಹಿಡಿಂಬನ ತೋಟಕ್ಕೆ ಬಾರದೆ ಹೊರಗೇ ಉಳಿಯುತ್ತದೆ... ತೋಟ ಬರಡಾಗುತ್ತದೆ. ಕೊನೆಗೆ ತನ್ನ ತೋಟದ ದುಃಸ್ಥಿತಿಯನ್ನು ಕಂಡು ಅರಿವು ಪಡೆದ ಹಿಡಿಂಬ ಮಕ್ಕಳನ್ನು ತೋಟಕ್ಕೆ ಆಹ್ವಾನಿಸುತ್ತಾನೆ. ವಸಂತ ಮತ್ತೆ ಮರಳಿ ಬಂದು ತೋಟ ನಳನಳಿಸುತ್ತದೆ.
|
ಶ್ರೀ ಎನ್ ಶ್ರೀನಿವಾಸ ಉಡುಪರು ನಿವೃತ್ತ ಶಿಕ್ಷಕರು. ಕಥೆ ಹೇಳುತ್ತಲೇ ಅಲ್ಲಿ ಬರುವ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸುವಲ್ಲಿ ಸಿದ್ಧಹಸ್ತರು. ನವಕರ್ನಾಟಕ ಪ್ರಕಟಿಸಿದ ‘ಕುಂಭಕರ್ಣನ ನಿದ್ದೆ’ ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶು ಸಾಹಿತ್ಯ ಬಹುಮಾನ’ ತಂದಿದೆ.
|
|
| |
|
|
|
|
|
|
|
|
|