|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ. ಭಾರತೀಯ ವಿಶ್ವವಿದ್ಯಾ ಲಯಗಳಲ್ಲೂ ಮಾನವಶಾಸ್ತ್ರ ಎಂದರೆ ಏನು ಎಂದು ಕೇಳುವ ಸಮಯದಲ್ಲಿ ಇರಾವತಿ ಯವರು ಜರ್ಮನಿಯ ಕೈಸರ್ ವಿಲ್ಹೆಲ್ಮ್ ಮಾನವಶಾಸ್ತ್ರ, ಮಾನವ ಆನುವಂಶಿಕತೆ ಮತ್ತು ಸುಸಂತತಿ ಶಾಸ್ತ್ರಗಳ ಸಂಸ್ಥೆ (ಕೈಸರ್ ವಿಲ್ಹೆಲ್ಮ್ ಇನ್ಸ್ಟಿಟ್ಯೂಟ್ ಆಫ್ ಆಂಥ್ರೋಪಾಲಜಿ, ಹ್ಯೂಮನ್ ಹೆರಿಡಿಟಿ ಅಂಡ್ ಯೂಜೆನಿಕ್ಸ್) ಯನ್ನು ಸೇರಿ ಪಿಎಚ್.ಡಿ. ಪಡೆಯುತ್ತಾರೆ. ಇರಾವತಿಯವರು ಎಂದಿಗೂ ‘ಆರಾಮ ಕುರ್ಚಿ’ಯ ಸಂಶೋಧಕರಾಗಿರಲಿಲ್ಲ. ಇವರು ತಮ್ಮ ಎಲ್ಲ ಕೆಲಸಗಳನ್ನು ಕ್ಷೇತ್ರಾಧ್ಯಯನದ ಮೂಲಕವೇ ನಡೆಸಿದ್ದು ವಿಶೇಷ. ಪಂಡರಿವಾರಿ ಸಂಸ್ಕೃತಿ ಯನ್ನು ಅರಿತುಕೊಳ್ಳಲು ಒಂದಲ್ಲ ಹಲವು ಸಲ ಭಕ್ತರ ಜೊತೆಗೆ ಪಂಡರಾಪುರ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ನಡೆಸುತ್ತಾರೆ. ಹಳ್ಳಿಗರ ನಡುವೆಯೇ ಉಳಿದು ಅವರ ದೈನಂದಿನ ಬದುಕನ್ನು ಅಧ್ಯಯನ ಮಾಡುವುದರ ಜೊತೆಗೆ ಅವರ ನಂಬಿಕೆ, ಮೂಢನಂಬಿಕೆ, ಭಾಷಾ ವೈಭವ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ದುರ್ಬಲತೆಗಳನ್ನು ಅಧ್ಯಯನ ಮಾಡುವ ವೈಖರಿ ಮಾದರಿ ಯಾಗಿದೆ. ಇರಾವತಿ ಕರ್ವೆಯವರ ‘ಯುಗಾಂತ’ ಎನ್ನುವ ಮಹಾಭಾರತ ಸಂಬಂಧಿತ ಸಂಶೋಧನಾ ಪ್ರಬಂಧ, ಪ್ರತಿಯೊಬ್ಬ ಭಾರತೀಯನು ಒಮ್ಮೆಯಾದರೂ ಓದಲೇಬೇಕಾದ ಕೃತಿ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|