|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಮ್ಮ ಮನಸ್ಸು ಎಲ್ಲಿದೆ, ಹೇಗಿದೆ? ಅದರ ರಚನೆ, ಬೆಳವಣಿಗೆ ಹೇಗೆ? ಅದು ಹೇಗೆ ಕೆಲಸ ಮಾಡುತ್ತದೆ? ಕೆಲವರ ಮನೋಸಾಮರ್ಥ್ಯ ಹೆಚ್ಚು. ಕೆಲವರ ಮನೋಸಾಮರ್ಥ್ಯ ಕಡಿಮೆ - ಏಕೆ? ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಡುವುದು ಹೇಗೆ? ಮನಸ್ಸಿನ ಏಕಾಗ್ರತೆ, ನೆನಪಿನ ಶಕ್ತಿ, ವಿವೇಚನೆ, ಸಹನಾಶಕ್ತಿಯನ್ನು ಹೆಚ್ಚಿಸುವುದು ಹೇಗೆ? ಮನಸ್ಸಿಗೆ ಬರುವ ಕಾಯಿಲೆಗಳಾವುವು? ಅವುಗಳ ಲಕ್ಷಣಗಳೇನು ? ಪರಿಹಾರವೇನು ? ಮನಸ್ಸು ದಾರಿ ತಪ್ಪಿ, ಅಪರಾಧ ಮಾಡುವುದು ಏಕೆ ? ಮನಸ್ಸು - ಆತ್ಮದ ಸಂಬಂಧವೇನು ? ಸತ್ತ ಮೇಲೆ ಆತ್ಮ ಇದೆಯೇ ? ಅದು ಮತ್ತೊಂದು ಜನ್ಮವನ್ನು ಪಡೆಯುತ್ತದೆಯೇ, ಅಥವಾ ಅಂತರ ಪಿಶಾಚಿಯಾಗುತ್ತದೆಯೇ ? ದೆವ್ವ ಭೂತಗಳು ನಿಜವೇ, ನಮ್ಮ ಮನಸ್ಸಿನ ಕಲ್ಪನೆಗಳೇ ? ಎಷ್ಟೊಂದು ಪ್ರಶ್ನೆಗಳು! ಇವಕ್ಕೆ ಉತ್ತರ, ಈ ಹೊತ್ತಿಗೆಯಲ್ಲಿ. ತಡವೇಕೆ ಇಂದೇ ಕೊಳ್ಳಿರಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|