|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
120 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
186880 |
‘ದೆವ್ವದ ಕಥೆ ಹೇಳೂ...’ ಅಂತ ನಾವೆಲ್ಲಾ ರಾತ್ರಿ ಹೊತ್ತಲ್ಲಿ ಅಜ್ಜಿಯನ್ನು ಪೀಡಿಸುತ್ತಿದ್ದ ದಿನಗಳು ನನಗೆ ಇಂದಿಗೂ ನೆನಪಿವೆ. ಅಜ್ಜಿ ದೆವ್ವದ ಕತೆ ಹೇಳಬೇಕು, ಅದನ್ನು ಕೇಳುತ್ತಾ ನಾವು ನಿದ್ದೆಗೆ ಜಾರಬೇಕು. ಕನಸಲ್ಲಿ ಅದೇ ದೆವ್ವ ಪ್ರತ್ಯಕ್ಷವಾಗಿ ನಮ್ಮನ್ನು ಪೀಡಿಸಬೇಕು. ಭೂತ, ಪ್ರೇತ, ಪಿಶಾಚಿ, ದೆವ್ವ ಇವೆಲ್ಲವೂ ನಮ್ಮ ಪಾಲಿಗೆ ಒಂದೇ ಜಾತಿಗೆ ಸೇರಿದವು. ಈ ನಿರಾಕಾರ ಜೀವಿಗಳನ್ನು ನಾವು ನೋಡಿದ್ದೇವೆ ಎಂದು ನನ್ನ ಹಳ್ಲಿಯಲ್ಲಿರುವ ಮುಕ್ಕಾಲು ಪಾಲು ಹಿರಿಯರು ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬಹುಶಃ ಇದು ಮಕ್ಕಳನ್ನು ರಂಜಿಸುವುದಕ್ಕೆ ಅಥವಾ ಬೆದರಿಸುವುದಕ್ಕೆ ಅವರೇ ಹುಡುಕಿಕೊಂಡ ಉಪಾಯವಿರಬಹುದು. ಸಾಮಾನ್ಯವಾಗಿ ಎಲ್ಲಾ ದೆವ್ವಗಳ ಹುಟ್ಟಿನ ಹಿಂದೆ ಒಂದು ಅಸಹಜ ಸಾವು ಇದ್ದೇ ಇರುತ್ತದೆ. ಅದುವೇ ಕತೆಯ ಮೂಲ, ಮಿಕ್ಕಿದ್ದೆಲಾ ದೆವ್ವದ ಲೀಲೆಗೆ ಮೀಸಲು.
ಭಯ, ಕುತೂಹಲವನ್ನೇ ಗ್ರಾಸವಾಗಿಸಿಕೊಂಡಿದ್ದರೂ ತರ್ಕದ ಪರಿಧಿಯೊಳಗೇ ಹರಿದಾಡುವ ಇಂಥಾ ದೆವ್ವದ ಕತೆಗಳನ್ನು ಜೋಗಿ ದೆವ್ವಗಳೇ ಬೆಚ್ಚಿಬೀಳುವಂತೆ ಬರೆದಿದ್ದಾರೆ. ‘ಓ ಮನಸೇ..’ ಪಾಕ್ಷಿಕದಲ್ಲಿ ಈ ಕತೆಗಳು ಸರಣಿಯಾಗಿ ಪ್ರಕಟವಾದಾಗ ಕೆಲವು ಓದುಗರು ಈ ದೆವ್ವಗಳು ಇಂದಿಗೂ ಬದುಕಿವೆಯಾ ಎಂದು ಫೋನ್ ಮಾಡಿ ವಿಚಾರಿಸಿದ್ದುಂಟು. ಸದ್ಯ, ಅಡ್ರೆಸ್ ಕೇಳಲಿಲ್ಲ! ಹಾಗೆ ನೋಡಿದರೆ ನಾನು ಮತ್ತು ಜೋಗಿ ಇಬ್ಬರೂ ದೆವ್ವಗಳ ಊರಿನಿಂದಲೇ ಬಂದವರು. ಅವುಗಳ ಜೊತೆಗಿನ ಒಡನಾಟ ನಮ್ಮನ್ನು ಮನುಷ್ಯರಾನ್ನಾಗಿಸಿದೆ ಮತ್ತು ಬೆಂಗಳೂರಿನ ಪ್ರಜೆಗಳನ್ನು ಅರ್ಥ ಮಾಡಿಕೊಳ್ಳೂವುದಕ್ಕೆ ನೆರವಾಗಿದೆ. ನಮ್ಮಿಬ್ಬರ ಭೂತಕಾಲವನ್ನು ಸಹನೀಯವಾಗಿಸಿದ ಈ ಎಲ್ಲಾ ದೆವ್ವಗಳಿಗೂ ಕೃತಜ್ಞತೆಯನ್ನು ಹೇಳುತ್ತಾ ಇಲ್ಲಿರುವ ತರಲೆ ದೆವ್ವಗಳ ಕೀಟಲೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನಿಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
- ಉದಯ ಮರಕಿಣಿ
|
ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.
|
|
| |
|
|
|
|
|
|
|
|
|