|
|

| Rs. 300 | 10% |
Rs. 270/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾವಋಷಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ “ಒಲವೇ ನಮ್ಮ ಬದುಕು” ಒಂದು ಅಪೂರ್ವ ಕವನಸಂಗ್ರಹ. ಒಲವಿನ ಸಿದ್ಧಾಂತವನ್ನು ದಶದರ್ಶನಗಳ ಮೂಲಕ ಬೇಂದ್ರೆ ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಚಾರದಲ್ಲಿ ವಿವೇಕಕ್ಕೆ ಹೇಗೆ ಪ್ರಾಧಾನ್ಯವೋ ಹಾಗೆಯೇ ಪ್ರೀತಿಯಲ್ಲಿಯೂ ಒಂದು ಹೃದಯದ ವಿವೇಕ ಮೂಡಬೇಕಾಗುತ್ತದೆ ಎಂಬ ಬೇಂದ್ರೆ ಒಲವಿನ ಸೂತ್ರ ಇಲ್ಲಿ ಆವಿಷ್ಕಾರಗೊಂಡಿದೆ. ಈ ಪ್ರಕಟಣೆಯ ವೈಶಿಷ್ಟ್ಯವೆಂದರೆ ಬೇಂದ್ರೆಯವರ ಒಲವಿನ ಗೀತೆಗಳಿಗೆ ವಿಶ್ವವಿಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ರೇಖೆಗಳ ಸೊಬಗನ್ನು ನೀಡಿರುವುದು, ಇದರೊಡನೆ ಖ್ಯಾತ ಕಲಾವಿದ ಸುರೇಶ ಕುಲಕರ್ಣಿಯವರ ಚಿತ್ರಗಳೂ ಇವೆ. ಕಾವ್ಯ-ಕುಂಚ ಸಮಾಗಮವಾಗಿ ಈ ಕೃತಿ ಬೆಳಕನ್ನು ಕಂಡಿದೆ.
|
ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.
|
|
| |
|
|
|
|
|
|
|
|
|