|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಾಲವಿಧವೆ ಆರ್. ಕಲ್ಯಾಣಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಸಾರ್ವಜನಿಕ ಒಳಿತಿಗಾಗಿ ತನ್ನ ಬದುಕನ್ನು ರೂಪಿಸಿಕೊಂಡ ಪರಿ ಆಶ್ಚರ್ಯಕರವಾಗಿದೆ ಹಾಗೂ ಮಾದರಿಯಾಗಿದೆ. ಕೊಳ್ಳೇಗಾಲದ 18 ಮೊಳ ನೂಲಿನ ಸೀರೆಯನುಟ್ಟು, ಕೂದಲನ್ನು ಗಂಟು ಕಟ್ಟಿ, ಹಣೆಗೆ ನಾಮವನ್ನಿಟ್ಟು ಬರಿಗಾಲಿನಲ್ಲಿಯೇ ನಡೆಯುತ್ತ ಸಮಾಜಸೇವೆಗೆ ಮುಂದಾಗುತ್ತಿದ್ದರು. ಅರಿಯದೆ ಯಾರಾದರೂ ‘ನಿಮಗೆಷ್ಟು ಮಕ್ಕಳು?‘ ಎಂದು ಕೇಳಿದರೆ ‘ಸಾವಿರದ ಒಂದು ಕಣಮ್ಮಾ!‘ ಎನ್ನುತ್ತಿದ್ದರು. ತಾವು ಕಟ್ಟಿದ ‘ಅಖಿಲ ಕರ್ನಾಟಕ ಮಕ್ಕಳಕೂಟ‘ದ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಿದ್ದರು. ‘ಆರ್.ಕಲ್ಯಾಣಮ್ಮನವರ ಮಕ್ಕಳ ಆಟದ ಮೈದಾನ‘ ಮತ್ತು ‘ಶಾರದಾ ಸ್ತ್ರೀ ಸಮಾಜ‘ ಅವರ ನೆನಪನ್ನು ಶಾಶ್ವತವಾಗಿ ಉಳಿಸಿವೆ. ಆರ್.ಕಲ್ಯಾಣಮ್ಮನವರು ಒಮ್ಮೆ ಮೈಸೂರು ಮಹಾರಾಜರ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರನ್ನು ಕಾಣಲು ಹೊರಟಾಗ ಸ್ವಯಂ ಮಹಾರಾಜರೇ ಹೊರಬಂದು ಸ್ವಾಗತಿಸಿದರಂತೆ! 1935ರ ದಸರಾ ಮಹೋತ್ಸವದಲ್ಲಿ ಮಹಾರಾಜರು ಕಲ್ಯಾಣಮ್ಮನವರ ಸೇವೆಯನ್ನು ಪರಿಗಣಿಸಿ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿದರು.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|