|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಬ್ಬ ವಿಜ್ಞಾನಿಯ ಗೌರವಾರ್ಥ, ಆತ ನಡೆಸಿದ ಸಂಶೋಧನೆಗೆ ಆತನ ಹೆಸರನ್ನೇ ನೀಡುವುದುಂಟು. ಉದಾಹರಣೆಗೆ ‘ರಾಮನ್ ಪರಿಣಾಮ‘. ಹೀಗೆ ಗಣಿತಶಾಸ್ತ್ರದಲ್ಲಿ ಸುಮಾರು 25ಕ್ಕೂ ಹೆಚ್ಚು ನಾಮದಾನಗಳನ್ನು ತನ್ನ ಹೆಸರಿನಲ್ಲಿ ಪಡೆದಿರುವ ಅಪರೂಪದ ಗಣಿತಶಾಸ್ತ್ರಜ್ಞ ರಾಮಾನುಜನ್! ರಾಮಾನುಜನ್ ಅವರ ಜೀವನವನ್ನು ಆಧರಿಸಿ ಪುಸ್ತಕಗಳು ಬಂದಿವೆ. ನಾಟಕಗಳು ಪ್ರಯೋಗವಾಗಿವೆ. ಚಲನಚಿತ್ರಗಳು ನಿರ್ಮಾಣವಾಗಿವೆ. ಕಾದಂಬರಿ ಪ್ರಕಟವಾಗಿದೆ. ಭಾರತ ಸರ್ಕಾರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ರಾಮಾನುಜನ್ ಹುಟ್ಟಿದ ಡಿಸೆಂಬರ್ 22ನ್ನು ‘ರಾಷ್ಟ್ರೀಯ ಗಣಿತ ದಿನ‘ವನ್ನಾಗಿ ಆಚರಿಸುತ್ತಿದೆ. ರಾಮಾನುಜನ್ ಅವರ 125ನೆಯ ಜನ್ಮವರ್ಷವನ್ನು (2012) ‘ಅಂತಾರಾಷ್ಟ್ರೀಯ ಗಣಿತ ವರ್ಷ‘ವೆಂದು ಕರೆದು ಗೌರವಿಸಿದೆ. ಹತ್ತು ಸಾವಿರ ಡಾಲರುಗಳ ‘ಶಾಸ್ತ್ರ ರಾಮಾನುಜನ್ ಪ್ರೈಜ಼್‘ನ್ನು ಈಗ ಪ್ರತಿ ವರ್ಷ ನೀಡಲಾಗುತ್ತಿದೆ. ರಾಮಾನುಜನ್ ಒಬ್ಬ ಜೀನಿಯಸ್! ಆಯ್ಲರ್, ಗಾಸ್, ಜಾಕೋಬಿಯಂತಹವರ ಸಾಲಿನಲ್ಲಿ ನಿಲ್ಲವಲ್ಲವನು. ಇಂತಹ ಪ್ರತಿಭೆಯನ್ನು ಸರಳವಾಗಿ ಹಾಗೂ ಆಕರ್ಷಕವಾಗಿ ಈ ಪುಸ್ತಕದಲ್ಲಿ ಪರಿಚಯ ಮಾಡಿಕೊಡಲಾಗಿದೆ.
|
ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.
|
|
| |
|
|
|
|
|
|
|
|
|