|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಧುನಿಕ ವೈದ್ಯ ವಿಜ್ಞಾನದ ಪಿತಾಮಹ ‘ಹಿಪ್ಪೋಕ್ರೇಟ್ಸ್‘ ಹುಟ್ಟುವುದಕ್ಕೆ ಸುಮಾರು 150 ವರ್ಷಗಳ ಹಿಂದೆ ಹುಟ್ಟಿರಬಹುದಾದ ಸುಶ್ರುತ, ಅದುವರೆಗಿನ ಭಾರತೀಯ ಶಸ್ತ್ರವೈದ್ಯ ವಿಜ್ಞಾನದ ಅರಿವನ್ನೆಲ್ಲ ಒಂದೆಡೆ ಸಂಗ್ರಹಿಸಿ ‘ಸುಶ್ರುತ ಸಂಹಿತೆ‘ ಎನ್ನುವ ಗ್ರಂಥವನ್ನು ನಮಗೆ ನೀಡಿ ಮಹದುಪಕಾರವನ್ನು ಮಾಡಿರುವರು. ಈ ಗ್ರಂಥವು ಆಧುನಿಕ ವೈದ್ಯಕೀಯದ ಮೇಲೆ, ಮುಖ್ಯವಾದ ಶಸ್ತ್ರವಿಜ್ಞಾನದ ಮೇಲೆ ಅಪಾರ ಪ್ರಭಾವ ಬೀರಿದೆ. ಇಂದು ‘ಸುರೂಪಿಕಾ ಶಸ್ತ್ರಚಿಕಿತ್ಸೆ‘ಯನ್ನು ಸುಶ್ರುತನು ಹೇಗೆ ವರ್ಣಿಸಿರುವನೋ, ಹೆಚ್ಚು ಕಡಿಮೆ ಹಾಗೆಯೇ ಇಂದೂ ನಾವು ಮಾಡುತ್ತಿದ್ದೇವೆ. ಸುಶ್ರುತ ವಿವರಿಸಿದ 20 ಹರಿತ ಹಾಗೂ 101 ಹರಿತವಲ್ಲದ ಶಸ್ತ್ರಚಿಕಿತ್ಸಾ ಉಪಕರಣಗಳಲ್ಲಿ ಬಹುಪಾಲು ಉಪಕರಣಗಳನ್ನು ಹೆಚ್ಚಿನ ಬದಲಾವಣೆಯಿಲ್ಲದೇ ಹಾಗೆಯೇ ಉಪಯೋಗಿಸುತ್ತಿದ್ದೇವೆ. ಕಣ್ಣಿನ ಪೊರೆಯನ್ನು ಕಳೆಯಲು ಸುಶ್ರುತ ಬಳಸುತ್ತಿದ್ದ ವಿಧಾನವನ್ನೇ ಇತ್ತೀಚಿನವರೆಗೆ ಬಳಸುತ್ತಿದ್ದೆವು. ಹಿಪ್ಪೋಕ್ರೇಟ್ಸ್ ವೈದ್ಯರಿಗೆ ಒಂದು ನೀತಿ ಸಂಹಿತೆಯನ್ನು ರೂಪಿಸುವ ಮೊದಲೇ ಸುಶ್ರುತನು ವೈದ್ಯರಿಗೂ ಹಾಗೂ ವೈದ್ಯ ಅಧ್ಯಾಪಕರಿಗೂ ನೀತಿ ಸಂಹಿತೆಯನ್ನು ರೂಪಿಸಿದ್ದನು ಎನ್ನುವುದು ಹೆಮ್ಮೆಯ ವಿಚಾರ.
|
ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.
|
|
| |
|
|
|
|
|
|
|
|
|