|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬದುಕು ಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಾರವತ್ತಾದ, ಸಂಕ್ಷಿಪ್ತ, ಧ್ಯೇಯವಾಕ್ಯಗಳು ಗಾದೆಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ, ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.
|
ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|