|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನುಷ್ಯನ ಬದುಕು ತೀರಾ ಸಂಕೀರ್ಣವಾದಷ್ಟು, ಅವನು ಪ್ರಕೃತಿದತ್ತ ಸುಖ, ರುಚಿಗಳಿಂದ ವಂಚಿತನಾಗಿ ಯಾಂತ್ರಿಕವಾದ ಅತೃಪ್ತ ಬದುಕಿಗೆ ಹೊಂದಿಕೊಳ್ಳುತ್ತಾನೆ. ಬಾಯಿ ಚಪ್ಪರಿಸಿ ಊಟ ಮಾಡುವ ದಿನಗಳು ಅವನ ಪಾಲಿಗಿಲ್ಲ. ಅಕ್ಕರೆಯ ತಾಯ್ತಂದೆ ಮಡದಿ ಮಕ್ಕಳ ನಡುವೆ ನಗುತ್ತಾ ಕಾಲ ಕಳೆಯುವುದುದೊಂದು ಕನಸಷ್ಟೆ.
ಅತ್ತೆ ಮಾವಂದಿರ ನಡುವೆ ಬಾಳದೆ ಸಿಡಿದು ಬರುವ ಸೊಸೆ ಕರುಳ ಸಂಬಂಧಕ್ಕೆ ಮುಕ್ತಾಯವಾಡಿದರೆ, ಉದ್ಯೋಗಕ್ಕೋ ಸಮಾಜದ ಚಟುವಟಿಕೆಯ ಸಲುವಾಗಿ ಹೊರಗೆ ಉಳಿಯುವ ಹೆಣ್ಣು ಮಧುರ ದಾಂಪತ್ಯಕ್ಕೆ ತೆರೆ ಹಾಕಿ ಬಿಟ್ಟರೇ, ಬೋರ್ಡಿಂಗ್ನಲ್ಲಿ ಬೆಳೆಯುವ ಮಕ್ಕಳು! ಇಂಥದ್ದರ ನಡುವೆ ನಾವು ಕಳೆದುಕೊಳ್ಳುವುದು ಎಷ್ಟು?
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|