|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನಲ್ಲಿರುವ ಆನೆಕೆರೆ ಅರಣ್ಯದ ಆನೆಗಳು ಮರಿ ಹಾಕಲು ಆರಿಸಿಕೊಳ್ಳುತ್ತಿದ್ದ ತಾಣ. ಹುಟ್ಟಿದ ಮರಿ ತಾಯಿಯೊಂದಿಗೆ ನಡೆಯುವಂತಾಗುವವರೆಗೆ ಅವು ಅಲ್ಲಿಂದ ಕದಲುತ್ತಿರಲಿಲ್ಲ. ಒಮ್ಮೆ ಮರಿ ಹಾಕುವ ಸಂದರ್ಭದಲ್ಲಿ ಏನೋ ತೊಡಕುಂಟಾಗಿ, ಕಾಡುಪ್ರೇಮಿ ರೈತ್ಯನೊಬ್ಬ ದಾದಿಯಾಗಿ ಹೆರಿಗೆಗೆ ಸಹಾಯ ಮಾಡಿದ. ಮರಿ ಎಲ್ಲರ ಕಣ್ಮಣಿಯಾಗಿ ಬೆಳೆಯುತ್ತ ಬಂದಂತೆ, ಅದರ ಮೇಲೆ ಸಾ ಮಿಲ್ಲಿನವರ, ಸರ್ಕಸ್ಸಿನವರ ಕಣ್ಣು ಬಿತ್ತು. ಇವರೆಲ್ಲರಿಂದ ಆನೆಮರಿಯನ್ನು ಪಾರುಮಾಡಲು ಆತ ಎಲ್ಲ ಬಗೆಯ ಕಿರುಕುಳಗಳನ್ನು ಎದುರಿಸಬೇಕಾಯಿತು. ಸ್ವಾರಸ್ಯಕರವಾದ ಈ ಕೃತಿಯನ್ನು ಶ್ರೀ ಕಂನಾಡಿಗಾ ನಾರಾಯಣ ರಚಿಸಿದ್ದಾರೆ.
|
ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಇವರು ಬಿ.ಬಿ.ಎಂ.ಪಿ.ಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. “ಕಥಾಭೂಮಿ” ದ್ವೈಮಾಸಿಕದ ಗೌರವ ಸಂಪಾದಕರು.
|
|
| |
|
|
|
|
|
|
|
|
|