|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಲೆನಾಡಿನ ಇನ್ನಷ್ಟು ಚಿತ್ರಗಳು
ಮಲೆನಾಡಿನ ಬಗ್ಗೆ ಕುವೆಂಪು ತೆರೆದಿಟ್ಟ ಚಿತ್ರಗಳು, ಅವು ಕಟ್ಟಿಕೊಟ್ಟ ಭಾವಗಳು ಒಂದೆರಡಲ್ಲ. ಮಲೆನಾಡಿನ ಸೊಬಗು ಮತ್ತು ಅಲ್ಲಿನ ಕೌತುಕಗಳನ್ನು ಇನ್ನಷ್ಟು ಬಸಿಯುವಂಥ ಬರಹಗಳನ್ನು ತೇಜಸ್ವಿ ನಮ್ಮ ಮುಂದೆ ಇಟ್ಟಿದ್ದಾರೆ. ಈಗ ಮಳೆ-ಮಲೆ ನಾಡಿನ ಇನ್ನಷ್ಟು ಚಿತ್ರಗಳನ್ನು "ಆದ್ರೆ ಮಳೇಲಿ ಆದವ್ನೆ ಗಂಡ" ಎನ್ನುವ ಪುಸ್ತಕದಲ್ಲಿ ನೆಂಪೆ ದೇವರಾಜ್ ನಮ್ಮ ಮುಂದಿಟ್ಟಿದ್ದಾರೆ. ಕಳವಳಗಳನ್ನೂ ದಾಖಲಿಸಿದ್ದಾರೆ. ಬರಹಗಳಲ್ಲಿ ಪ್ರಸ್ತಾಪವಾಗುವ ತೀರ್ಥಹಳ್ಳಿ, ಸಂಪಿಗೆ ಮತ್ತು ತುಂಗೆ, ಆಧುನಿಕತೆಯ ರೂಪಾಂತರಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಕಾಡುಮೇಡುಗಳಲ್ಲಿ ಅಲೆದಾಟ, ಪರಿಸರ ಹೋರಾಟ ಮತ್ತು ಒಂದಿಷ್ಟು ಕಾಲ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಜತೆಗೆ ಪತ್ರಿಕೋದ್ಯಮ -ಹೀಗೆ ಸದಾ ಕ್ರಿಯಾಶೀಲತೆ ಕಾಯ್ದುಕೊಂಡಿರುವ ದೇವರಾಜ್, ತಮ್ಮ ಪುಸ್ತಕದಲ್ಲಿ ಮಳೆ ಕಾಡು, ಮಳೆ ಮೀನು ಮತ್ತು ಮಳೆ ಸಂಸ್ಕೃತಿಯನ್ನು ದಾಖಲಿಸಿದ್ದಾರೆ. ಆಪ್ತ ಬರವಣಿಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿ 29 ಲೇಖನಗಳಿದ್ದು, ಅವುಗಳಲ್ಲಿ ಕೆಲವು ಇನ್ನಷ್ಟು ವಿಸ್ತಾರಬಯಸುವಂತಿವೆ. ಆದಾಗ್ಯೂ, ಹೇಳಬೇಕಾದ್ದನ್ನು ಹೇಳುವಲ್ಲಿ ಗೆದ್ದಿವೆ. "ಈ ಮಲೆನಾಡು ತನ್ನ ನೀರೋಳಗೆ, ಕಾಡೊಳಗೆ, ಮಣ್ಣೊಳಗೆ, ಪಶು-ಪಕ್ಷಿ-ಪ್ರಾಣಿಗಳೊಳಗೆ, ಹಬ್ಬ ಮತ್ತು ಆಚರಣೆಗಳೊಳಗೆ, ಹರಕೆ-ಹಸೆ-ಹಾಡೊಳಗೆ ನೂರಾರು ಜೀವಂತಿಕೆಯನ್ನು ಹೊರಹೊಮ್ಮಿಸುತ್ತಲೇ ಇರುತ್ತದೆ" ಎನ್ನುವ ಲೇಖಕರು, ಆರಿದ್ರಾ ಮಳೆಯೊಂದಿಗೆ ಆರಂಭವಾಗುವ ಮದುವೆ ಸುಗ್ಗಿಯ ಸಂಭ್ರಮವನ್ನು ಒಂದು ಬರಹದಲ್ಲಿ ಹೇಳುತ್ತಾರೆ. 1924ರ ಮಾರಿ ನೆರೆಯ ಅನಾಹುತವನ್ನು ಇನ್ನೊಂದು ಬರಹ ನೆನಪಿಸುತ್ತದೆ. ಇನ್ನು ಮಳೆಯ ಊರುಗಳಲ್ಲೂ ಕೇಳಿಸುತ್ತಿರುವ ಬೋರ್ ಕೊರೆಯುವ ಸದ್ದುಗಳ ಬಗ್ಗೆ ಲೇಖಕರು ಕಳವಳ ವ್ಯಕ್ತಪಡಿಸುತ್ತಾರೆ. ಒಂದು ಕಾಲದಲ್ಲಿ ಬೋರ್ ಕೊರೆಯುವುದನ್ನು ನೋಡಲು ಜನ ಗುಂಪು ಸೇರುತ್ತಿದ್ದರು. ಆದರೆ, ಈಗ ಜನರಲ್ಲಿ ಯಾವ ಭಾವವೂ ಇಲ್ಲ. ಬೋರ್ ಕೊರೆತದ ಸದ್ದು ಕಿವಿಗೆ ಯಾವ ಭಾವವನ್ನೂ ತರುತ್ತಿಲ್ಲ ಅನ್ನುವ ಸಂಗತಿಯನ್ನು ಅವರು ದಾಖಲಿಸುತ್ತಾರೆ. ಅಡಿಕೆಗೆ ಕೊಳೆ ರೋಗ, ವಾರಾಹಿ ಯೋಜನೆ, ತಾಲೂಕು ಕಚೇರಿಯ ಸಂಪಿಗೆ ಮರ, ಗುತ್ತಿ ತಿಮ್ಮಿಯರ ಪಿಸುಮಾತು, ತುಂಗೆಯ ಮೀನುಗಳು, ಕಾಡುಹಂದಿಯ ಶಿಕಾರಿ ಸೇರಿದಂತೆ ಮಲೆನಾಡಿನ ವೈವಿಧ್ಯ ಮತ್ತು ಸದ್ಯದ ಸವಾಲುಗಳನ್ನು ಲೇಖಕರು ಹೇಳುತ್ತಾರೆ. ಡಾ.ಕೆ.ಪುಟ್ಟಸ್ವಾಮಿ ಗುರ್ತಿಸುವಂತೆ, ಇದು ಕೇವಲ ಕಳೆದು ಹೋಗುತ್ತಿರುವುದರ, ಬದುಕಿನ ಬಗೆಗಿನ ಕೇವಲ ಹಳವಂಡ ಮಾತ್ರವಾಗಿರದೇ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಚಿತ್ರವತ್ತಾಗಿ ಹೇಳುವ ರಸಕಥನಗಳೂ ಆಗಿವೆ,
|
| |
|
|
|
|
|
|
|
|