|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಪ್ನ ಬುಕ್ ಹೌಸ್, Sapna Book House |
ಈಗಿನ ಮುದ್ರಣದ ಸಂಖ್ಯೆ |
: |
19 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
215 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788128019098 |
ಕೋಡ್ |
: |
179005 |
ಡಾ. ಕೆ. ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿಗಳು ಹಲವಾರು. ಅವುಗಳಲ್ಲಿ `ಅಳಿದ ಮೇಲೆ` ಒಂದು. ಬದುಕನ್ನು ಕಾರಂತರು ನೋಡುವ ಬಗೆ ಅಪೂರ್ವವಾದದ್ದು. ಅವರ ಕಾದಂಬರಿಗಳು ಬದುಕನ್ನು ಅನ್ವೇಷಿಸುವ ಪರಿ ಬೆರಗು ಹುಟ್ಟಿಸುವಂತದ್ದು. ಬದುಕನ್ನು ಯಾವುದೇ ನಾಟಕೀಯತೆ ಇಲ್ಲದೆ, ನಿಷ್ಕರ್ಷೆಗೆ ಗುರಿಪಡಿಸದೆ ಯಥಾವತ್ತಾದ ಸಾಕ್ಷೀಪ್ರಜ್ಞೆಯಲ್ಲಿ ಕಾದಂಬರಿಯಲ್ಲಿಳಿಸುವ ಅವರ ಲೇಖನಿಯ ಕಾಯಕ ಸಾಟಿಯಿಲ್ಲಂತದ್ದು.
ಈ ಕಾದಂಬರಿಯ ಮುನ್ನುಡಿಯಲ್ಲಿ ಕಾರಂತರ ಮಾತುಗಳು ಇಂತಿವೆ: ಈ `ಅಳಿದ ಮೇಲೆ` ಎಂಬ ಕಾದಂಬರಿಯಲ್ಲಿ ಮಾನವನ ಬಾಳಿನಲ್ಲಿ ಉಳಿಯುವುದೇನೆಂದು ಹುಡುಕಿ ನೋಡುವ ಪ್ರಯತ್ನದ ಕಣ್ಣಿದೆ; ಬರಿಯ ಸ್ಮರಣೆಗಳಷ್ಟೇ ಆಮೇಲೆ ಉಳಿಯುವ ವಸ್ತುಗಳು. ನಡೆದು ದಾರಿ ಸಾಗಿದವನು ತನ್ನ ಜಾಡನ್ನು ಬಿಟ್ಟುಹೋಗುವಂತೆ, ಕಳೆದ ಬಾಳು ಅನ್ಯರಲ್ಲಿ ಮೂಡಿಸಿದ ಪ್ರಭಾವಗಳಿಂದ ಅಳೆಯಬಹುದಾದ ವಸ್ತು. ನಮ್ಮ ಬಾಳು ಅದಕ್ಕಿಂತಲೂ ಗಾಢವಾದ ಮುದ್ರೆಯೊತ್ತಬಲ್ಲುದೆಂದು ಎಲ್ಲರೂ ಎಣಿಸಬೇಕಾಗಿಲ್ಲ. ಆ ಲಭ್ಯತೆ ಎಲ್ಲರಿಗೂ ಸಿಗಲಾರದು. ಈ ಕಾದಂಬರಿಯ ಯಶವಂತನಂತೆ ಜನ ಹುಟ್ಟುತ್ತಾರೆ, ಬಾಳುತ್ತಾರೆ, ಸಾಯುತ್ತಾರೆ. ಬಾಳಿದವರು ತಮ್ಮ ಸಂಪರ್ಕಕ್ಕೆ ಬಂದ ಕೆಲವರಿಗೆ ಹಿತವರು! ಹಲವರಿಗೆ ತಿಳಿಯದವರು. ಬದುಕಿನ ಸಂಪರ್ಕದಲ್ಲುಂಟಾದ ಹಿತಾಹಿತ ಪ್ರಭಾವಗಳನ್ನು ಮೇಳವಿಸಿ, ಯಶವಂತರ ಬಾಳು ಎಂಥದಿತ್ತೆಂದು ಹುಡುಕಲೆತ್ನಿಸಿದ್ದೇನೆ. ಇಲ್ಲಿ ಇದು ಅವರು ಬಿಟ್ಟ ಹೆಜ್ಜೆಯ ಜಾಡನ್ನು ಹಿಂಬಾಲಿಸಿ ಹೋದಂತೆ.
ಈ ಕೃತಿಯು, ಒಬ್ಬ ವ್ಯಕ್ತಿ ಸತ್ತಮೇಲೆ ಅವನ ಸುತ್ತಲಿನ ಜನ ಹೇಗೆ ಅವನ ಬಗ್ಗೆ ಮಾತಾಡುತ್ತಾರೆ ಅನ್ನುವದರ ಬಗ್ಗೆ ವಿವರಿಸುತ್ತದೆ.
|
ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.
ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು.
|
|
| |
|
|
|
|
|
|
|
|
|