|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
316 |
ಪುಸ್ತಕದ ಗಾತ್ರ |
: |
1/4 Crown Size |
ಕೋಡ್ |
: |
175514 |
ಪ್ರಖ್ಯಾತ ಹಾಡುನಟಿ ಅಮೀರ್ಬಾಯಿ ಕರ್ನಾಟಕಿ (1912-1965) ಅವರ ಜೀವನಕಥನವಿದು. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ಮನ್ಸೂರ್ ಮುಂತಾದವರ ಜತೆಗೂಡಿ ‘ಕಿತ್ತೂರರಾಣಿ ರುದ್ರಮ್ಮ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ ಇವರು, ‘ಚಿರಂಜೀವಿ’ ‘ಚಂದ್ರಹಾಸ’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿ ಹಾಡಿದರು. ಬೀಳಗಿಯಂತಹ ಪುಟ್ಟ ಊರಿನ ಸಾಮಾನ್ಯ ಕುಟುಂಬದಿಂದ ಮುಂಬೈ ಶಹರಿಗೆ ಹೋಗಿ, ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದರು. ಇವರ ಮಧುರ ಹಾಡುಗಳುಳ್ಳ ಹಿಂದಿ ಸಿನಿಮಾ ‘ಕಿಸ್ಮತ್’, ಮೂರುವರ್ಷ ಎಂಟು ತಿಂಗಳ ಕಾಲ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು; ಇವರು ಹಾಡಿದ ‘ವೈಷ್ಣವ ಜನತೊ’ ಗಾಂಧೀಜಿಯವರಿಗೆ ಪ್ರಿಯವಾಗಿತ್ತು; ಇವರ ಅನೇಕ ಹಾಡುಗಳು ಬ್ರಿಟಿಶ್ ವಿರೋಧಿ ಚಳುವಳಿಯಲ್ಲಿ ಪ್ರಭಾತ್ ಫೇರಿಯ ಗೀತೆಗಳಾಗಿದ್ದವು; ಇವರ ‘ಅಬ್ತೇರೆ ಸಿವಾ’ ಹಾಡನ್ನು, ಮುಂಬೈನ ಲೋಕಲ್ ಟ್ರೈನುಗಳ ಭಿಕ್ಷುಕರು ಬಳಸುತ್ತಿದ್ದರು. ಕಾಲಗರ್ಭದಲ್ಲಿ ಹೂತುಹೋಗಿದ್ದ ಈ ಕಲಾವಿದೆಯ ಜೀವನ ಚಿತ್ರವನ್ನು, ನೂರಾರು ಜನರ ಭೇಟಿ ಹಾಗೂ ಐದಾರು ವರ್ಷಗಳ ತಿರುಗಾಟದಲ್ಲಿ ಸಿಕ್ಕ ಎಳೆಗಳನ್ನು ಜೋಡಿಸಿ ಕಟ್ಟಲಾಗಿದೆ. ಇದು ಹಾಡುನಟಿಯೊಬ್ಬಳ ಜೀವನ ಚರಿತ್ರೆ ಮಾತ್ರವಲ್ಲ, 20ನೇ ಶತಮಾನದ ಪೂರ್ವಾರ್ಧದಲ್ಲಿದ್ದ ರಂಗಭೂಮಿ, ಸಿನಿಮಾ, ಹಿಂದೂಸ್ತಾನಿ ಸಂಗೀತ ಹಾಗೂ ವಸಾಹತುಶಾಹಿ ವಿರೋಧಿ ಆಂದೋಲನಗಳು ಏಕೀಭವಿಸಿದ ಸಾಂಸ್ಕೃತಿಕ ಕಥನವೂ ಆಗಿದೆ.
ಸಾಂಪ್ರದಾಯಿಕ ಸಮಾಜವು ಎಳೆಯುವ ಗಡಿಗೆರೆಗಳ ಸೀಮೋಲ್ಲಂಘನೆಯಲ್ಲಿ ಸೃಜನಶೀಲ ಕಲೆ ಸೃಷ್ಟಿಯಾಗುತ್ತದೆ. ಆದರೆ ಇದಕ್ಕಾಗಿ ಕಲಾವಿದರು ತಮ್ಮ ಬಾಳಿನಲ್ಲಿ ಪಟ್ಟಿರುವ ಕಷ್ಟ, ತೆತ್ತಿರುವ ಬೆಲೆ, ಊಹೆಗೂ ಮೀರಿದ್ದು. ಅದರಲ್ಲೂ ಕಲಾವಿದೆಯರು ಮಾಡುವ ಈ ಸೀಮೋಲ್ಲಂಘನೆಯಲ್ಲಿ ಅವರ ಕಲಾಸೃಷ್ಟಿ, ಸಂಕಟ ಹಾಗೂ ಬಿಡುಗಡೆಯ ಹೋರಾಟಗಳು ಬೇರೆಮಾಡಲಾಗದಂತೆ ಬೆರೆತಿರುತ್ತವೆ.
|
ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|