|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2007 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
183 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788190575539 |
ಕೋಡ್ |
: |
146679 |
ಮುಚ್ಚಿದ ಕಣ್ಣನ್ನು ತೆಗೆದ ದಕ್ಷಿಣಾಮೂರ್ತಿಗಳು “ಕೆಲವು ಸತ್ಯಗಳನ್ನು ಮನುಷ್ಯ ತಿಳಿದುಕೊಂಡಾಗ ದುಃಖ ಆಗೋಲ್ಲ. ಒಂದು ಸರ್ಟನ್ ಏಜ್ವರೆಗೂ ಮನುಷ್ಯ ಸಂಪಾದನೆ ಮಾಡಿಕೋತಾ ಹೋಗುತ್ತಾನೆ. ಆಮೇಲೆ ಕಳೆದುಕೊಳ್ಳೋದು ಷುರುವಾಗುತ್ತೆ, ಉಲ್ಲಾಸ, ಉತ್ಸಾಹ, ಯೌವನ, ಆರೋಗ್ಯ, ಮುಖ್ಯವಾಗಿ ಮಕ್ಕಳ ಮೇಲಿನ ಹಿಡಿತ, ಅಧಿಕಾರ... ಹೀಗೆ ಒಂದೊಂದಾಗಿ ದೂರವಾಗುತ್ತೆ. ಮನೆಯ ಜೀವಂತಿಕೆಯಂತಿದ್ದ ಶುಭ ಗಂಡನ ಮನ್ಗೆ ಹೋದ್ಲು. ಈಗ ನರಹರಿ ಹೆಂಡತಿಯ ಜೊತೆಯಲ್ಲಿ ಬೇರೆ ಹೋಗ್ತಾ ಇದ್ದಾನೆ. ಇದು ನನ್ನ, ನಿನ್ನ ಲೆಕ್ಕಾಚಾರದಲ್ಲಿ ಇತ್ತಾ?” ಕೇಳಿದಾಗ, ಸುಕನ್ಯ ಗಂಡನ ಎದೆಯಲ್ಲಿ ಮುಖವಿಟ್ಟು ಬಿಕ್ಕಿದರು.
ಇಂತಹ ಹಲವು ಸತ್ಯಗಳ ಅಗರ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|