|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಗಸ್ಟ್ 8, 1942 ಮುಂಬೈ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ‘ಬ್ರಿಟೀಷರೆ! ಭಾರತ ಬಿಟ್ಟು ತೊಲಗಿ‘ ಆಂದೋಲನವನ್ನು ಆರಂಭಿಸುವ ಒಪ್ಪಿಗೆಯನ್ನು ಸೂಚಿಸಿತು. ಈ ಘೋಷಣೆಯು ಹೊರಬೀಳುತ್ತಿರುವಂತೆಯೇ ಬ್ರಿಟಿಷ್ ಸರ್ಕಾರವು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರನ್ನು ಬಂಧಿಸಿತು. ಅವರೆಲ್ಲರನ್ನು ವಿಶೇಷ ರೈಲು ಬೋಗಿಯಲ್ಲಿ ತುಂಬಿ ಅಪರಿಚಿತ ಪ್ರದೇಶಕ್ಕೆ ರವಾನಿಸಿತು. ಮುಂಬೈ ಗೊವಾಲಿಯ ಕೆರೆ ಮೈದಾನದಲಿ ರಾಷ್ಟ್ರ ಧ್ವಜಾರೋಹಣಕ್ಕೆ ಎಲ್ಲ ವ್ಯವಸ್ಥೆಗಳು ನಡೆದವು. ಧ್ವಜಾರೋಹಣ ಆಗುತ್ತಿರುವಂತೆಯೇ ಚಳವಳಿಯೂ ಆರಂಭವಾಗುತ್ತಿತ್ತು. ಆದರೆ ರಾಷ್ಟ್ರಧ್ವಜವನ್ನು ಮೇಲೇರಿಸಬೇಕಾದ ಮೌಲಾನ ಅಬ್ದುಲ್ ಕಲಾಂ ಆಜ಼ಾದ್ ಎಲ್ಲಿಯೂ ಕಾಣಲಿಲ್ಲ. ಜನ ಧ್ವಜಾರೋಹಣಕ್ಕೆ ಕಾಯುತ್ತಿದ್ದರು. ನಿಗದಿತ ಸಮಯ ಬರುತ್ತಿರುವಂತೆಯೇ ಅರುಣಾ ಅಸಫ್ ಅಲಿಯವರು ನೇರವಾಗಿ ವೇದಿಕೆಯನ್ನು ಏರಿ ಧ್ವಜಾರೋಹಣವನ್ನು ಮಾಡಿಯೇಬಿಟ್ಟರು! ನೀಲಾಕಾಶದಲ್ಲಿ ಧ್ವಜ ಹಾರಾಡಲಾರಂಭಿಸಿತು! ಇದನ್ನು ಕಂಡ ಜನಸ್ತೋಮದ ಜಯಕಾರ ಮುಗಿಲುಮುಟ್ಟಿತು! ಅರುಣಾ ಭೂಗತರಾದರು. ಬ್ರಿಟಿಷ್ ಸರ್ಕಾರ ಆಕೆಯ ಮನೆ ಹಾಗೂ ಕಾರನ್ನು ಮುಟ್ಟುಗೋಲು ಹಾಕಿಕೊಂಡಿತು! ಆಕೆಯ ತಲೆಯ ಮೇಲೆ ರೂ.5000 ಬಹುಮಾನವನ್ನು ಘೋಷಿಸಿತು!!
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|