|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ (ಜನನ : ಕ್ರಿ.ಶ.476) ಮೇರುಕೃತಿಯಾದ “ಆರ್ಯಭಟೀಯಮ್” ಸಂಸ್ಕೃತ ಕೃತಿಯ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ.
ಈ ಪುಸ್ತಕದಲ್ಲಿ “ಆರ್ಯಭಟೀಯಮ್”ನ ನಾಲ್ಕು ಪಾದಗಳಲ್ಲಿರುವ 121 ಶ್ಲೋಕಗಳ ಸರಳ ಕನ್ನಡದಲ್ಲಿ ಅನುವಾದವನ್ನು ಗಣಿತೀಯ ವಿವರಣೆಗಳೊಂದಿಗೆ ನೀಡಲಾಗಿದೆ. ಓದುಗರ ಅನುಕೂಲಕ್ಕಾಗಿ ಅವಶ್ಯವಾಗಿರುವಲ್ಲಿ ಆಂಗ್ಲ ಸಮಾನಪದಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯ ಭಾಗದಲ್ಲಿ ಬಹಳ ಉಪಯುಕ್ತವಾದ ಮೂರು ‘ಪರಿಶಿಷ್ಟ’ಗಳನ್ನು ಸೇರಿಸಲಾಗಿದೆ.
|
ಡಾ. ಬಾಲಚಂದ್ರ ರಾವ್ ಎಸ್ ಅವರು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.
|
|
| |
|
|
|
|
|
|
|
|
|