|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತ ದೇಶದ ಬಹುದೊಡ್ಡ ಶಾಪವೆಂದರೆ ಜಾತಿ ಪದ್ಧತಿ. ಪದ್ಮಶ್ರೀ ಬಿ.ಪಿ. ರಾಧಾಕೃಷ್ಣರವರು ತಮ್ಮ ಜಾತಿಯ ಕಾರಣದಿಂದ ಅನುಭವಿಸುವ ಸಾಮಾಜಿಕ ಅವಮಾನಗಳು ಅಸಂಖ್ಯ. ಆದರೆ ಅವರು ಜಾತಿಗೆ ಎಂದೂ ಬೆಲೆಕೊಡಲಿಲ್ಲ. ಬದಲಿಗೆ ‘ಹಿಂದುಳಿದ ಕೋಮಿನವರು ನಾವು ಹಿಂದುಳಿದವರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆಯೇ ವಿನಾ ಆ ಹೆಸರು ತೊಡೆದು ಹೋಗುವಂತೆ ಪ್ರಯತ್ನ ಪಡುತ್ತಿಲ್ಲ. ನಾನು ಹಿಂದುಳಿದ ಕೋಮಿನವನು, ನನಗೆ ಕೆಲಸ ಕೊಡಿ ಎಂದು ಕೇಳಿಬರುವ ಕೂಗು ಕಡಿಮೆಯಾಗಬೆಕು. ಹಿಂದುಳಿದವನು ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯವಲ್ಲ‘ ಎಂದು ಕಲಿಕೆಗೆ ಮಹತ್ವ ಕೊಟ್ಟರು. ಇವರ ಧೀಃಶಕ್ತಿ ಯಾವ ಪ್ರಮಾಣದಲ್ಲಿತ್ತೆಂದರೆ ಕೋಲಾರದ ಚಿನ್ನದ ನಿಕ್ಷೇಪಗಳಲ್ಲಿ ಲೆಡ್ ಟೆಲ್ಯೂರಿಯಂ ಸಲ್ಫೈಡ್ ಖನಿಜವನ್ನು ವಿವರಿಸಿದ ಡಾ. ಗೆಂಕ್ಲಿನ್ ಎಂಬ ವಿಜ್ಞಾನಿಯು, ಆ ಖನಿಜಕ್ಕೆ ‘ರಾಧಾಕೃಷ್ಣೈಟ್‘ ಎಂದು ನಾಮಕರಣ ಮಾಡಿ ಗೌರವ ಸಲ್ಲಿಸುತ್ತಾರೆ. ರಾಧಾಕೃಷ್ಣರವರು ಬರೆದ ‘ಅಂತರ್ಜಲ‘ ಎನ್ನುವ ಕೃತಿಯು ಅಂತರ್ಜಲ ವಿಜ್ಞಾನದ ಬೈಬಲ್ ಎಂದೇ ಹೆಸರಾಗಿದೆ.
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|