|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಂಘ, ಶಿವಮೊಗ್ಗ - ಇದರ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ 2013 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಧೂಮಕೇತುವೊಂದು ಆಗಸದಲ್ಲಿ ಕಾಣಿಸಿಕೊಂಡರೆ ಏನೋ ವಿಪತ್ತು ಕಾದಿದೆಯೆಂದು ಹೆದರಿ ಮುದುರುವ ಕಾಲ ಹಿಂದೆ ಸರಿದಿದೆ. ಹೊಸ ಹೊಸ ಧೂಮಕೇತುಗಳನ್ನು ಕಂಡುಹಿಡಿದು ವಿಜ್ಞಾನಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದಾಗ ಅವುಗಳ ಬಗ್ಗೆ ಕುತೂಹಲ ಉಂಟಾಗಿ ಜನ ಅದನ್ನು ವೀಕ್ಷಿಸುತ್ತಿದ್ದಾರೆ. ಇವು ಸೌರಮಂಡಲದಲ್ಲಿ ಸುದೀರ್ಘ ವೃತ್ತಾಕಾರದಲ್ಲಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವ ಆಕಾಶಗಾಮಿಗಳೆಂದು ಇಂದು ಎಲ್ಲರಿಗೂ ತಿಳಿದಿದೆ. ಉದ್ದನೆಯ ಬಾಲದಿಂದ ಎಲ್ಲರನ್ನೂ ಆಕರ್ಷಿಸುವ ಧೂಮಕೇತುಗಳು ವರ್ಷಕ್ಕೆ 20-25 ಬಂದು ಹೋಗುತ್ತವೆ. ಆದರೆ ಎಲ್ಲವೂ ಸುದ್ದಿಯಾಗುವುದಿಲ್ಲ. ಬಾಲವಿಲ್ಲದಿದ್ದರೆ ಅವುಗಳ ಅಸ್ತಿತ್ವವೂ ನಮಗೆ ತಿಳಿಯಲಾಗದಷ್ಟು ಸಣ್ಣ ಕಾಯಗಳು ಇವು. ಬಾಲ ಇದ್ದ ಮೇಲೆ ತಲೆಯೂ ಇರಬೇಕಲ್ಲವೇ? ಯಾವುದಕ್ಕೂ ಇಲ್ಲದ ತಲೆ - ಬಾಲ ಇವುಗಳಿಗೇಕೆ? ಅಥವಾ ಇವು ತಾತ್ಕಾಲಿಕ ಅಲಂಕಾರಗಳೇ? ಹಾಗಾದರೆ ಬಾಲ ಕಳೆದುಹೋಗುವುದೇ? ಈ ಧೂಮಕೇತುಗಳಿಗೂ ಸಾವು ಇದೆಯೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಹೊಂದಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಈ ವರ್ಷದ ಕೊನೆಗೆ ಭೂಗ್ರಹದ ಜನರಿಗೆ ಭೇಟಿನೀಡಲು ಆಕಾಶದಲ್ಲಿ ಕಾಣಿಸುವ ಲವ್ ಜಾಯ್ ಹಾಗೂ ಇನ್ನಿತರ ಧೂಮಕೇತುಗಳ ಬಗ್ಗೆ ತಿಳಿಸಿಕೊಡುವ ಕೃತಿಯಿದು.
|
ಶ್ರೀಮತಿ ಬಿ ಎಸ್ ಶೈಲಜಾ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಅತಿ ಹೆಚ್ಚು ಉಷ್ಣತೆಯ ಯಮಳ ನಕ್ಷತ್ರಗಳ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ‘ಹೊಸತು’ ಪತ್ರಿಕೆಯ ಪ್ರಾರಂಭದಿಂದಲೂ ‘ನಭಾವಲೋಕನ’ ಅಂಕಣ ಬರೆಯುತ್ತಿದ್ದಾರೆ. ಖಗೋಳ್ ವಿಜ್ಞಾನಕ್ಕೆ ಸಂಬಂಧಿಸಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇವರ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘Chintamani Ragoonatha Charry and Contemporary Indian Astronomy’ ‘ಏನು...? ಗಣಿತ ಅಂದ್ರಾ...?’ ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ. ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ.
|
|
| |
|
|
|
|
|
|
|
|
|