|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
242 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381119860 |
ಕೋಡ್ |
: |
167593 |
ಹುಸೇನಮ್ಮನ ಬಗ್ಗೆ ಬಡಕೂಲಿಗಳ ಬಗ್ಗೆ ಯೋಚಿಸಿದ ವೇಣು. ಅವರಿಗೆ ಇರುವ ಸಮಸ್ಯೆಗಳು ಬಗೆಹರಿಯಲಾರದಂಥವು ಎನಿಸಿತು. ಆದರೂ ಅವರೆಲ್ಲರ ಬದುಕಿನಲ್ಲಿ ಸಂತೃಪ್ತಿ ಇದೆ. ನೆಮ್ಮದಿ ಇದೆ! ಸಂಬಂಧಿಕರು ಇದ್ದಾರೆ, ತಾಳಿ ಕಟ್ಟಿಸಿಕೊಂಡ ಮಡದಿ ಇದ್ದಾಳೆ, ತನಗೆ ವಿದ್ಯೆ ಇದೆ, ಆರ್ಥಿಕವಾಗಿ ಹಿಂದುಳಿದಿಲ್ಲ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳು ಇದೆ, ಆದರೆ ಬದುಕಿಗೆ ಅರ್ಥವಿಲ್ಲ, ಸಂತೃಪ್ತಿ ಇಲ್ಲ. ಯಾಕೆ? ಆ ಮನುಷ್ಯನ ಕೆಲವು ಅವಶ್ಯಕತೆಗಳಲ್ಲಿ ಪ್ರೀತಿಯು ಒಂದು. ಊಟ, ನಿದ್ದೆಯಂತೆ ಪ್ರೀತಿಯ ಅಗತ್ಯವು ಇದೆ. ಬಯಕೆಗೆ ಬಾಯಿಬಿಡುವ ಶರೀರವು ಇದೆ’ ಇದೊಂದು ಕಾದಂಬರಿಯು ಒಂದು ಮುಖ್ಯ ಪಾತ್ರವಾದ ವೇಣುವಿನ ಕೊರಗು.
`ಸಾಸಿವೆಯಷ್ಟು ಸುಕಕ್ಕೆ ಸಾಗರದಷ್ಟು ದುಃಖ ನೋಡ` ಇದು ಅಲ್ಲಮಪ್ರಭುವಿನ ಮಾತು. ಭ್ರಮಾಧೀನ ಬದುಕಿನಿಂದ ಮಡದಿಯನ್ನು ಹೊರತರಲು ಪ್ರಯತ್ನಿಸಿ ಸೋತದ್ದೇಕೆ? ವೇಣು ತಲುಪಿದ್ದು ಎಲ್ಲೆಗೆ? `ಬೆಳ್ಳಿ ದೋಣಿ` ಕನಸಿಗಷ್ಟೆ ಸೀಮಿತವಾಯಿತೇ?
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|