|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
6 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
194 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381119921 |
ಕೋಡ್ |
: |
167595 |
‘ಚೈತ್ರದ ಕೋಗಿಲೆ’ ನನಗೆ ಇಷ್ಟವಾದ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯನ್ನು ಓದುಗರ ಜೊತೆ ವಿಮರ್ಶಕರು ಕೂಡ ಮೆಚ್ಚಿಕೊಂಡಿದ್ದಾರೆ. ಹೆಚ್ಚು ಕಡಿಮೆ ಎಲ್ಲರಿಗೂ ಹೆಚ್ಚು ಇಷ್ಟವಾದ ಪಾತ್ರ ಮುರಳಿಯದು. ಯಾಕೆ? ‘ನಂಗೆ ಮುರಳಿ ಪಾತ್ರ ಇಷ್ಟ. ಅಂಥ ನೇರ, ಪ್ರಾಮಾಣಿಕ ಹೃದಯದ ಯುವಕ ಎಲ್ಲಿದ್ದಾನೆ?’ ಎಂದು ಪ್ರತಿಕ್ರಿಯಿಸಿದ ಓದುಗರಲ್ಲಿ ಬರೀ ಯುವತಿಯರು ಮಾತ್ರ ಇಲ್ಲ. ಅಂಥ ಮಗನನ್ನು ಬಯಸುವ ತಂದೆ ತಾಯಿಯರು ಅವನಂಥ ಅಣ್ಣ ಭಾವ ತಮಗಿರಲೆಂದು ಬಯಸುವ ಷೋಡಶಿಯರು ಇದ್ದಿದ್ದು ಅಚ್ಚರಿಯೆ.
‘ಉತ್ತಮ ಕಾದಂಬರಿಗಳು ಸಂತೋಷದ ಜೊತೆ ಬೇಸರ ಮತ್ತು ದುಃಖವನ್ನು ಒಳಗೊಂಡಿರುತ್ತವೆ. ಮೊದಲ ಪುಟದಿಂದ ಕೊನೆಯ ಪುಟದವರೆಗೂ ಉದ್ವೇಗ ಹುಟ್ಟಿಸುವಂಥ ಕಾದಂಬರಿ ಮಹಾನ್ ಕೃತಿಯಾಗದು. ಶಾಂತತೆಯೇ ದೃಢ ವ್ಯಕ್ತಿತ್ವದ ಗುರುತು. ದುರ್ಬಲತೆಯನ್ನು ಬೇರೆಯವರಿಗೆ ನೋವಾಗದ ರೀತಿಯಲ್ಲಿ ಹತ್ತಿಕ್ಕುವ ಗುಣವನ್ನು ಮುರಳಿಯ ಪಾತ್ರದಲ್ಲಿ ಕಂಡೆ’ ಒಬ್ಬ ಹಿರಿಯ ಓದುಗರ ಅಭಿಪ್ರಾಯ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|