|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಾಚೀನ ಭಾರತೀಯ ವೈದ್ಯವಿಜ್ಞಾನದ ಮಹಾ ಭಂಡಾರ ಚರಕ ಸಂಹಿತೆ. ಚರಕ ಸಂಹಿತೆಯನ್ನು ಬರೆದ ಚರಕಾಚಾರ್ಯರ ವಿಚಾರ ಇಂದಿಗೂ ಮನನೀಯ. ಚರಕಾಚಾರ್ಯರು ವೈದ್ಯನಾಗಬೇಕೆಂದು ಬರುವ ಎಲ್ಲರನ್ನೂ ವಿದ್ಯಾರ್ಥಿಗಳನ್ನಾಗಿ ಸ್ವೀಕರಿಸುತ್ತಿರಲಿಲ್ಲ. ಬದಲಿಗೆ ತಮ್ಮದೇ ಆದ ಮಾನದಂಡಗಳಿಗನುಗುಣವಾಗಿ, ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ನೈತಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದರು. ಹಾಗೆಯೇ ವೈದ್ಯ ಅಧ್ಯಾಪಕರನ್ನು ಆಯ್ಕೆ ಮಾಡುವಾಗಲೂ ಹಲವು ಮಾನದಂಡಗಳನ್ನು ವಿಧಿಸುತ್ತಿದ್ದರು. ಚರಕಾಚಾರ್ಯರು ವೈದ್ಯ ಗ್ರಂಥಗಳ ಅಧ್ಯಯನಕ್ಕೆ ಎಷ್ಟು ಮಹತ್ವವನ್ನು ಕೊಡುತ್ತಿದ್ದರೋ ಅದಕ್ಕಿಂತಲೂ ಹೆಚ್ಚಿನ ಮಹತ್ವವನ್ನು ತರ್ಕಬದ್ಧ ‘ಸಬ್ಜಕ್ಟ್ ಪ್ರೆಸೆಂಟೇಶನ್‘ ಹಾಗೂ ಚರ್ಚೆಗೆ ನೀಡುತ್ತಿದ್ದರು. ಕೇವಲ ಶಾಸ್ತ್ರಜ್ಞಾನಕ್ಕಿಂತ ಕುಶಲತೆಗೆ ಆದ್ಯತೆಯನ್ನು ನೀಡುತ್ತಿದ್ದರು. ಇಂದಿನ ದಿನಗಳಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ‘ಹಿಪ್ಪೋಕ್ರೇಟ್ಸ್‘‘ಪ್ರತಿಜ್ಞೆ‘ಯನ್ನು ಸ್ವೀಕರಿಸಿದರೆ, ಚರಕಾಚಾರ್ಯರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಮೊದಲೇ ಪ್ರತಿಜ್ಞೆಯನ್ನು ಬೋಧಿಸುತ್ತಿದ್ದರು!
|
ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.
|
|
| |
|
|
|
|
|
|
|
|
|