|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ|| ಕ್ರಿಶ್ಚಿಯನ್ ಬರ್ನಾರ್ಡ್ ಡೆನಿಸ್ ಡರ್ವಾಲ್ ಎಂಬ ಮಹಿಳೆಯ ಹೃದಯವನ್ನು ಲೂಯಿಸ್ ವಾಷ್ಕಾನ್ಸಿಕಿ ಎಂಬ ಪುರುಷನಿಗೆ ಯಶಸ್ವಿಯಾಗಿ ಬದಲಿ ಜೋಡಿಸಿದರು. ಇವರಿಬ್ಬರೂ ಶ್ವೇತವರ್ಣೀಯರಾಗಿದ್ದರು. ಬರ್ನಾಡ್ ಎರಡನೆಯ ಹೃದಯ ಬದಲಿ ಜೋಡಣೆಯ ಶಸ್ತ್ರಚಿಕಿತ್ಸೆಯಲ್ಲಿ ಡಾ|| ಫಿಲಿಪ್ ಬ್ಲಾಯಿ ಬರ್ಗ್ ಅವರಿಗೆ, ಕ್ಲೈವ್ ಹಾಪುಟ್ ಎಂಬ ವ್ಯಕ್ತಿಯ ಹೃದಯವನ್ನು ಬದಲಿ ಜೋಡಿಸುತ್ತಾರೆ. ಬರ್ಗ್ ಬಿಳಿಯ! ಹಾಪುಟ್ ಕರಿಯ! ಕರಿಯನೊಬ್ಬನ ಹೃದಯ ಬಿಳಿಯನೊಬ್ಬನ ಶರೀರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎನ್ನುವ ಸತ್ಯವನ್ನು ಪರಿಣಾಮಕಾರಿಯಾಗಿ ಜಗತ್ತಿಗೆ ಸಾರುತ್ತದೆ. ವರ್ಣದ್ವೇಷಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ ಎನ್ನುವುದನ್ನು ಸಾರುತ್ತದೆ. ಕ್ರಿಶ್ಚಿಯಾನ್ ಬರ್ನಾರ್ಡ್ ‘ದಯಾಮರಣ‘ದ (ಯುಥನೀಸಿಯ) ಪ್ರಬಲ ಪ್ರತಿಪಾದಕರಾಗಿದ್ದರು. ವಾಸಿಯಾಗದ ಕಾಯಿಲೆ ತರುವ ಅಪಾರ ನೋವು, ಅಸಹಾಯಕತೆ ಹಾಗೂ ಪರಾವಲಂಬಿತನವನ್ನು ಕಣ್ಣಾರೆ ಕಂಡರು. ಅಂತಹವರು ಗೌರವ ಹಾಗೂ ಘನತೆಯಿಂದ ದಯಾಮರಣದ ಮೂಲಕ ಮುಕ್ತಿ ಪಡೆಯುವುದು ಅಗತ್ಯ ಎಂದು ‘ಗುಡ್ ಲೈಫ್ ಗುಡ್ ಡೆಥ್‘ ಎಂಬ ಪುಸ್ತಕವನ್ನು ಬರೆದರು!
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|