|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಜ್ಞಾನ ಇತಿಹಾಸದಲ್ಲಿ ಕ್ಲಾಡಿಯನ್ ಟಾಲೆಮಿಯ ಸ್ಥಾನ ಬಹಳ ಮುಖ್ಯವಾದದ್ದು. ಟಾಲೆಮಿಯ ‘ಭೂಕೇಂದ್ರ ಸಿದ್ಧಾಂತ‘ ತಪ್ಪಿರಬಹುದು. ಆದರೆ ಕೊಪರ್ನಿಕಸ್ ‘ಸೌರಕೇಂದ್ರ ಸಿದ್ಧಾಂತ‘ವನ್ನು ಮಂಡಿಸಲು ಕಾರಣ ಟಾಲೆಮಿಯ ‘ಭೂಕೇಂದ್ರವಾದ‘ ಎನ್ನುವುದು ಸುಳ್ಳಲ್ಲ. ಟಾಲೆಮಿಯ ಗ್ರಹಪಥವು ದುಂಡಾಗಿರುತ್ತದೆ ಎಂದು ಬರೆದುದನ್ನು ಓದಿಯೇ ಕೆಪ್ಲರ್ ಅದು ದೀರ್ಘವೃತ್ತದಲ್ಲಿದೆ ಎನ್ನುವುದನ್ನು ಕಂಡುಹಿಡಿಯಲು ಸಾಧ್ಯವಾಯಿತು. ಟಾಲೆಮಿಯ ‘ಆಲ್ಮಜೆಸ್ಟ್‘ ಗ್ರಂಥವಿರದಿದ್ದರೆ, ಖಗೋಳ ವಿಜ್ಞಾನ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಟಾಲೆಮಿಯ ಬ್ಯಾಬಿಲೋನಿಯನ್ ಖಗೋಳಶಾಸ್ತ್ರಜ್ಞರು 800 ವರ್ಷಗಳ ಅವಧಿಯಲ್ಲಿ ಕಂಡುಕೊಂಡಿದ್ದ ಖಗೋಳ ಜ್ಞಾನವನ್ನು ಸಂಗ್ರಹಿಸುತ್ತಾನೆ. ಗ್ರೀಕ್ ಖಗೋಳ ಶಾಸ್ತ್ರಜ್ಞ ಹಿಪಾರ್ಕಸ್ ಗ್ರಹಚಲನೆಯನ್ನು ಅಧ್ಯಯನ ಮಾಡಲು ರೂಪಿಸಿದ ಗೋಳ ಮಾದರಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. 48 ತಾರಾಪುಂಜಗಳನ್ನು ದಾಖಲಿಸುತ್ತಾನೆ. ಗ್ರಹಗಳ ಚಲನೆಯನ್ನು, ಗ್ರಹಣಗಳ ಸಂಭವವನ್ನು ತಿಳಿಸುವ ‘ಪಂಚಾಂಗ‘ವನ್ನು ರೂಪಿಸುತ್ತಾನೆ. ಮುಂದಿನ ಎಲ್ಲ ಖಗೋಳಶಾಸ್ತ್ರಜ್ಞರು ಕ್ಲಾಡಿಯನ್ ಟಾಲೆಮಿಯ ಹೆಗಲ ಮೇಲೆ ನಿಂತೇ ಖಗೋಳವಿಜ್ಞಾನವನ್ನು ಪರಿಷ್ಕರಿಸುತ್ತಾ ಹೊಸ ಹೊಸ ಸಂಶೋಧನೆಯನ್ನು ನಡೆಸಿದ್ದು ಸತ್ಯ.
|
ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇರುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ, ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರೂ ಹೌದು. ವಿಜ್ಞಾನದ ನೂರಾರು ಲೇಖನಗಳು, ಹಲವು ಪುಸ್ತಕಗಳು ಪ್ರಕಟಣೆಗೊಂಡಿವೆ. ನವಕರ್ನಾಟಕ ಪ್ರಕಾಶನದ "ವಿಜ್ಞಾನ ಸರಳ ಪರಿಚಯ" ಮಾಲೆಯ ಸಂಪಾದಕರಲ್ಲೊಬ್ಬರು.
|
|
| |
|
|
|
|
|
|
|
|
|