|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾಹಿತ್ಯಕ್ಷೇತ್ರ - ವಿಜ್ಞಾನಕ್ಷೇತ್ರಗಳಲ್ಲಿ ತೆರೆಯ ಮರೆಗೆ ಸರಿದ ಕೆಲವೊಂದು ಸಂಗತಿಗಳನ್ನು ಇಲ್ಲಿ ಎದುರಿಗೆ ತಂದು ನಿಲ್ಲಿಸಲಾಗಿದೆ. ಅಂಚಿಗೆ ಸರಿದು ಲೆಕ್ಕಕ್ಕೇ ಇಲ್ಲವೆಂಬಂತೆ ಅವಗಣಿಸಿದ ಸಣ್ಣಪುಟ್ಟ ವಿಚಾರಗಳೂ ಮಹತ್ವಪಡೆದು ಇಲ್ಲಿ ರಾರಾಜಿಸಿವೆ. ಹಲವಾರು ಕಾಯಿಲೆಗಳಿಂದ ಇಂದು ನಾವು ಮುಕ್ತಿಪಡೆದು ಆರೋಗ್ಯವಂತರಾಗಿದ್ದೇವೆ. ಅದಕ್ಕಾಗಿ ಪ್ರಯೋಗಶಾಲೆಯಲ್ಲಿ ಬಲಿಪಶುಗಳಾಗಿ ಜೀವತೆತ್ತ ಇಲಿಗಳೆಷ್ಟು ? ನಾವೆಂದಾದರೂ ಯೋಚಿಸಿದ್ದಿದೆಯೇ ? ಎಲ್ಲವೂ ಮಾನವನ ಕಲ್ಯಾಣಕ್ಕಾಗಿ ಎಂಬ ಸಮಜಾಯಿಷಿ ಇರುತ್ತದೆ. ಇಂದು ಪ್ರಪಂಚ ರೋಬೋ ತಂತ್ರಜ್ಞಾನದ ಕಡೆಗೆ ವಾಲುತ್ತಿದೆ. ಮನುಷ್ಯನಿಂದ ಸಾಧ್ಯವಾಗದ ಕೆಲಸ ರೋಬೋಗಳಿಂದ ಮಾಡಿಸುವ ಚಾಣಾಕ್ಷ ಬುದ್ಧಿಯ ನಮಗೆ ಭೂಮಿಯ ಮೇಲೆ ಮಾಡಲು ಇನ್ನೇನು ಕೆಲಸ ಉಳಿದಿದೆ ? ಗಂಗಾ ನದಿಯ ಬಗ್ಗೆ ನಾವಿಂದು ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಲೇಖನ ಇಲ್ಲಿ ನಮ್ಮ ಕಣ್ತೆರೆಸಲು ಪ್ರಯತ್ನಿಸಿದೆ. ಇಂಥ ಆಸಕ್ತಿದಾಯಕ ವಿಚಾರಗಳತ್ತ ನಮ್ಮನ್ನು ಚಿಂತಿಸುವಂತೆ ಮಾಡುವ ಬರಹಗಳು.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|