|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಚಾರ್ಯ ಧರ್ಮಾನಂದ ಕೊಸಾಂಬಿ ಪ್ರಖ್ಯಾತ ಬೌದ್ಧ ಧರ್ಮದ ವಿದ್ವಾಂಸರು. ಬೌದ್ಧ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಲೆಂದೇ ಪಾಲಿ, ಸಿಂಹಳೀ, ಬರ್ಮೀ ಭಾಷೆಗಳನ್ನು ಕಲಿತರು. ಹಾರ್ವರ್ಡ್ ವಿಶ್ವವಿದ್ಯಾಲಯದ ಡಾ. ಜೇಮ್ಸ್ ವುಡ್ ಅವರ ಸಹಯೋಗದಲ್ಲಿ ಬೌದ್ಧ ಧರ್ಮದ ಪ್ರಮುಖ ಕೃತಿ ‘ವಿಶುದ್ಧಿಮಗ್‘ವನ್ನು ಸಂಪಾದಿಸಿದರು. ಕೊಸಾಂಬಿಯವರ ಬೌದ್ಧ ಧರ್ಮದ ಜ್ಞಾನ ಎಷ್ಟು ಆಳವಾಗಿರುತ್ತದೆಯೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದು ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಲು ಕೊಸಾಂಬಿಯವರೇ ಕಾರಣರು ಎಂದರೆ ಅದು ತಪ್ಪಾಗಲಾರದು. ಕೊಸಾಂಬಿಯವರು ಜೈನ ಧರ್ಮವನ್ನೂ ಆಳವಾಗಿ ಅಧ್ಯಯನ ಮಾಡಿದ್ದರು. ಜೈನ ಧರ್ಮದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಲ್ಲೇಖನ ವ್ರತವನ್ನು ಕೈಗೊಂಡು ಜೀವವನ್ನು ಬಿಡಲು ಪ್ರಯತ್ನಿಸಿದಾಗ, ಅದಕ್ಕೆ ಗಾಂಧೀಜಿಯವರು ಅಡ್ಡ ಬರುತ್ತಾರೆ. ಆದರೆ ಮತ್ತೆ ಕೊಸಾಂಬಿಯವರು ಸಲ್ಲೇಖನ ವ್ರತವನ್ನಾರಂಭಿಸಿದಾಗ ಗಾಂಧೀಜಿಯವರು ಅಡ್ಡ ಬರುವುದಿಲ್ಲ. 30 ದಿನಗಳ ವ್ರತದ ನಂತರ ಕೊಸಾಂಬಿಯವರು ಮರಣಿಸುತ್ತಾರೆ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|