|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಫ್ಲೈಯಿಂಗ್ ಸಾಸರ್’ ಎರಡನೆಯ ಭಾಗದಲ್ಲಿ ಮನುಷ್ಯರೊಡನೆ ‘ಯು.ಎಫ್.ಓ’ಗಳ ಮೂರನೆ ದರ್ಜೆಯ ಮುಖಾಮುಖಿಗಳನ್ನು ವಿವರಿಸಲಾಗಿದೆ. ‘ಫ್ಲೈಯಿಂಗ್ ಸಾಸರ್’ ಮೊದಲ ಭಾಗ ಓದಿದವರಿಗೆ ಇವುಗಳ ಚಾರಿತ್ರಿಕ ಹಿನ್ನೆಲೆ ಮತ್ತು ಈ ಘಟನೆಗಳನ್ನು ವರ್ಗೀಕರಿಸಲು ಉಪಯೋಗಿಸಿರುವ ಮಾನದಂಡಗಳೇನೆಂಬುದು ಗೊತ್ತಿರುವುದರಿಂದ ಅದನ್ನು ಇಲ್ಲಿ ಪುನರಾವರ್ತನೆ ಮಾಡುವುದು ಅನವಶ್ಯಕ. ಈ ಪುಸ್ತಕವನ್ನು ಸಿದ್ಧಪಡಿಸಿದ ಮೇಲೂ ‘ಫ್ಲೈಯಿಂಗ್ ಸಾಸರ್’ ಘಟನೆಗಳು ಅನೇಕವು ಸ್ಕಾಟ್ಲೆಂಡ್, ಅಮೆರಿಕಾ, ಸ್ಕಾಂಡಿನೇವಿಯ, ಮುಂತಾದ ಕಡೆಗಳಲ್ಲಿ ಸಂಭವಿಸುತ್ತಿರುವ ವರದಿಗಳು ಬರುತ್ತಲೇ ಇವೆ. ಈ ಪುಸ್ತಕದ ವ್ಯಾಖ್ಯಾನವೇ ಈ ಬಗ್ಗೆ ಕೊನೆಯ ಮಾತೆಂದು ಯಾರೂ ಯಾವತ್ತೂ ಭಾವಿಸಬಾರದು. ಯಾವ ಕ್ಷಣ ಬೇಕಾದರೂ ಯಾರಿಗೋ ಸಂಭವಿಸುವ ಯಾವುದೋ ಒಂದು ಘಟನೆ ನಮ್ಮ ‘ಯು.ಎಫ್.ಓ’ ತಿಳುವಳಿಕೆಯನ್ನು ಕ್ರಾಂತಿಕಾರಕವಾಗಿ ಬದಲಿಸಿ ಬುಡಮೇಲು ಮಾಡಬಹುದು. ಅದರ ಕಾರಣಕರ್ತರು ಓದುಗರಾದ ನೀವೇ ಯಾರಾದರೂ ಆಗಬಹುದು.
|
ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಗಳಿಸಿದ್ದಾರೆ.
|
|
| |
|
|
|
|
|
|
|
|
|