|
|

| Rs. 80 | 10% |
Rs. 72/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಂಬಿಕಾತನಯದತ್ತರ ‘ಗಂಗಾವತರಣ‘ವನ್ನು ‘ಸಂದೇಶವಾಹಕ ಗೀತಗುಚ್ಚ‘ ಎಂದು ಬಣ್ಣಿಸುವುದು ಸೂಕ್ತವೆಂದು ತೋರುತ್ತದೆ. ಈ ಕವನ ಸಂಕಲನವು ಒಂದು ‘ಸಪ್ತಕ‘ವಾಗಿದ್ದು, ಸಪ್ತವರ್ಣಗಳ - ಸಪ್ತಸ್ವರಗಳ ಸಂಗಮವಾಗಿ ರೂಪತಾಳಿದೆ. ವರಕವಿ ದ.ರಾ. ಬೇಂದ್ರೆಯವರು ಈ ಕವನಸಂಕಲನಕ್ಕೆ ‘ಗಂಗಾವತರಣ‘ ಎಂಬ ನಾಮವಿತ್ತಿರುವುದು ಅನ್ವರ್ಥವಾಗಿದೆ ಎಂದೇ ಹೇಳಬೇಕು. ಆಗಸದ ಕಾವ್ಯಗಂಗೆಯನ್ನು ಅಂಬಿಕಾತನಯದತ್ತ, ಭಗೀರತನಾಗಿ, ಭೂಮಿಗೆ ‘ಇಳಿದು‘ ಬರುವಂತೆ ಮಾಡಿ, ಈ ‘ಗಂಗಾವತರಣ‘ದಿಂದ ‘ಸತ್ತ ಜನರನ್ನು ಎತ್ತು‘ವಂತೆ ಮಾಡಿದ್ದಾರೆಂದರೆ, ಅದರಲ್ಲಿ ಯಾವ ಅತಿಶಯೋಕ್ತಿಯಿದ? ‘ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೇ?‘ ಎಂಬ ಪ್ರಶ್ನೆಗೆ ‘ಗಂಗಾವತರಣ‘ದಲ್ಲಿಯ ಗೀತ-ಗಂಗೆಯ ವಿಚಾರಪ್ರವಾಹ ಉತ್ತರ ನೀಡುತ್ತದೆ.
|
ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.
|
|
| |
|
|
|
|
|
|
|
|
|