|
|

| Rs. 5 | 10% |
Rs. 5/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗೋಹತ್ಯೆ ಒಂದು ಪರಾಮರ್ಶೆ
ಗೋವು ಮಾತ್ರವೇ ಪಶುವಲ್ಲ, ಬೇರೆ ಅನೇಕ ಪ್ರಾಣಿಗಳು ಸಹ ಅದೇ ಹೆಸರಿಗೆ ಪಾತ್ರವಾಗಿವೆ. ನಮ್ಮಲ್ಲಿ ಒಂದು ಸಾಂಸ್ಕೃತಿಕ ಪಿಡುಗು ಮನೆಮಾಡಿಕೊಂಡಿದೆ. ಅದೇನೆಂದರೆ, ಒಂದು ರೀತಿಯ ಆಚಾರ ವಿಚಾರಗಳು ಮಾನ್ಯ ಮತ್ತು ಶ್ರೇಷ್ಟ. ಆದರೆ ಬೇರೆಯವು ಕನಿಷ್ಠವಾದವು, ಎಂಬ ತಪ್ಪು ಭಾವನೆ, ಮಾನವನ ವಿಕಾಸದ ಹಾದಿಯಲ್ಲಿ ಹಸಿಮಾಂಸ ತಿನ್ನುತ್ತಿದ್ದ ಕಾಲವಿತ್ತು : ಹಾಗೆಂದು ಯಾರು ಹಸಿಮಾಂಸ ತಿನ್ನಬೇಕೆಂದು ಆಗ್ರಹಿಸುವುದಿಲ್ಲ. ಹಸುವೋ, ಎಮ್ಮೆಯೋ, ನಾಯಿಯೋ, ಯಾರಿಗಾದರೂ ಆಹಾರವಾಗಿದ್ದರೆ ಅದನ್ನು ಕಿತ್ತುಕೊಂಡು ಅವರಿಗೆ ಪರ್ಯಾಯವಾಗಿ ಏನು ಕೊಡೋಣ? ಕಿತ್ತುಕೊಳ್ಳುವ ಹಕ್ಕು ನಮಗೆಲ್ಲಿಯದು? ಅವರೇಕೆ ಅದನ್ನು ಬಿಟ್ಟುಕೊಡಬೇಕು? ಮನುಷ್ಯರನ್ನು ದನಕ್ಕಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತೇವಲ್ಲ, ಅದು ಎಂತಹ ಸಂಸ್ಕೃತಿ? ಇದೆಲ್ಲಾ ವಿಚಾರಯೋಗ್ಯ. ಪ್ರಜಾಪ್ರಭುತ್ವದಲ್ಲಿ ಯಾರೋ ತನ್ನ ಆಚರಣೆಯನ್ನು ಇತರರ ಮೇಲೆ ಹೇರಬಹುದೆ? ಹಾಗಿದ್ದರೆ, ಹಾಗೆ ಹೇರಿಸಿಕೊಳ್ಳುವವರು ಪ್ರತಿಯಾಗಿ ನಮ್ಮ ಮೇಲೆಯೇ ಅಂತಹ ವರ್ತನೆಯನ್ನು ಹೇರಿದರೆ ತಪ್ಪೆ? ಆಯ್ಕೆ ಅಥವಾ ರೂಢಿಯಿಂದ ನಾವೇನಾಗಿದ್ದೆವೋ ಅದು ಸಾರ್ವತ್ರಿಕವಾಗಬಹುದೆ?
ಭಾವೋದ್ರೇಕವನ್ನು ದೂರವಿಟ್ಟು ಗೋವಿನ ಪ್ರಶ್ನೆಯನ್ನು ವಿಶದೀಕರಿಸಿರುವ ನಾಗೇಶ ಹೆಗಡೆಯವರ ಈ ಕಿರುಹೊತ್ತಿಗೆ ನಮ್ಮ ಚಿಂತನೆಗೆ ಆಕರವಾಗಬಲ್ಲದು. ಆರೋಗ್ಯಕರವಾದ ನಿರ್ಭಾವುಕ ಚರ್ಚೆ ಇಂದಿನ ಅಗತ್ಯ..
|
ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.
ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ. ಫಿಲ್ ಮಾಡಿದರು.
|
|
| |
|
|
|
|
|
|
|
|
|