|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಬ್ಬ ಕಾದಂಬರಿ ಓದಿದ ಓದುಗರ ಪತ್ರ:
‘ಗ್ರೀಷ್ಮಾದಲ್ಲಿ ಸೊಬಗನ್ನ ಹುಡುಕಿದೆ. ಕೆಂಡಾಮಂಡಲ ಬಿಸಿಲು ಭೂಮಿಯ ರಸವನ್ನು ಹೀರಿ-ಬತ್ತಿದ ಕೊಳ, ಕಾಡಗಿಚ್ಚು. ಒಣಗಿದ ಮರಗಿಡಗಳು, ನೀರಿನ ಬರ, ಬಾಯಾರಿಕೆ - ಇಷ್ಟೆಲ್ಲದರಲ್ಲು ಗಂಭೀರ ಅರ್ಥವಿದೆ. ಅದನ್ನ ಹೇಗೆ ಸಾಧ್ಯ ಮಾಡಿದ್ದೀರಿ? ಓದಿದಾಗ ಪುಟ್ಟ ಕವನದಂತೆ, ಅದ್ಭುತವಾದ ಕಾವ್ಯದಂತೆ, ಸಮಗ್ರವಾದ ಕಾದಂಬರಿ ಮೋಡಿಗಾರಿಕೆಗೆ ನಮ್ಮನ್ನು ಒಳಪಡಿಸಿದ್ದೀರಿ. ಇದು ನಮಗೇಕೆ ಸಾಧ್ಯವಾಗಿಲ್ಲ?’ ಇಂಥದೊಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲ.
ಬದುಕಿನ ಎಲ್ಲಾ ಮಜಲುಗಳ ಹುಡುಕಾಟವನ್ನು ಪಾತ್ರವಾಗಿಸಿ, ಸನ್ನಿವೇಶವಾಗಿಸಿ, ತೀರಾ ಅಳೆದು ಸುರಿದು ವಿಚಿತ್ರವೆನ್ನುವಂತೆ ನೆಲದ ತಂಪನ್ನು ಹೀರುವ, ಬೆವರು ಹರಿಸುವ ವಸಂತದ ನಂತರದ ಗ್ರೀಷ್ಮಾವನ್ನು ಆಯ್ದುಕೊಂಡಿದ್ದೇನೆ. ವರ್ಷದ ನಾಲ್ಕು ಋತುಗಳನ್ನು ನೆನಪಿಸಿದ ಈ ಹೆಸರು ಇಷ್ಟವೇ, ನಿಮಗೂ ಇಷ್ಟವೆನಿಸಬಹುದು.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|