|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹದಿಹರೆಯ ಬಾಳಿನ ರಸ ಸಮಯ. ಆಸೆ ಆದರ್ಶಗಳ ನಡುವೆ ಕಲ್ಪನೆಯ ವಾಸ್ತವಿಕತೆಗಳ ಮಧ್ಯೆ ತನ್ನತನದ ಹುಡುಕಾಟ. ಕಲಿಕೆಯ ಬೆನ್ನು ಹತ್ತಿ ಉದ್ಯೋಗದ ಅನ್ವೇಷಣೆ. ಮೈಮನಗಳಲ್ಲಿ ಲೈಂಗಿಕತೆ ಅನುಪಮ ಅನುಭವಗಳ ಒರತೆ. ಅತ್ತ ಬಾಲ್ಯದ ಮುಗ್ಧತೆ ಇಲ್ಲ ಇತ್ತ ವಯಸ್ಸಿನ ಪ್ರೌಢತೆ ಇಲ್ಲ. ನಡುವೆ ಎಲ್ಲೋ ತ್ರಿಶಂಕು ಸ್ಥಿತಿ. ಮನದ ತುಂಬ ಗೊಂದಲದ ಆಂದೋಲನ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|