|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿ ಮದ್ದು ಇನ್ನೊಂದಿಲ್ಲ. ವಿಮರ್ಶೆ: ಕಿಸೆಯಲ್ಲೂ ಕಚಗುಳಿ ನೀಡುವ ಈ ಪುಸ್ತಕದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಹಾಸ್ಯ ಚಟಾಕಿಗಳಿವೆ. ನಕ್ಕರೆ ಮನಸ್ಸಿನ ದುಗುಡ ಮಾಯವಾಗುತ್ತದೆ. ನಕ್ಕು ಹಗುರಾಗಿರಿ ಎಂಬ ಮಾತು ಇದನ್ನು ಸೂಚಿಸುತ್ತದೆ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ಹಾಸ್ಯ ಚಟಾಕಿ’ ತುಣುಕುಗಳನ್ನು ರಚಿಸಿರುವ ಶ್ರೀ ಸಂಪಟೂರು ವಿಶ್ವನಾಥ್ ರವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರು. ಖ್ಯಾತ ನಗೆ ಬರೆಹಗಾರರು. ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಕಮಲಂ ಅರಸು ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿಯುವುದಿಲ್ಲ; ಚಟಾರನೆ ಸಿಡಿದು ಅರಳುತ್ತದೆ.
|
ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|