|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
Pre Order
ನಿಕಷಕ್ಕೆ ಒಡ್ಡಿ ನೋಡಿದರೆ, ನೀವು ಬರೆದಿರುವ ಕತೆಗಳ ಪೈಕಿ ಕೆಲವು ಕತೆಗಳಾಗಿಲ್ಲ. ಅನುಭವಗಳನ್ನು ಬಡಿದು, ಕಿವಿಹಿಂಡಿ, ಬೈದು, ಹೇಗಾದರೂ ಪಳಗಿಸಿ ಕತೆಯಾಗಿಸಲೇ ಬೇಕು ಎಂಬ ಹಟವೂ ನಿಮಗಿಲ್ಲ. ಹೀಗಾಗಿ ಎಷ್ಟು ದಕ್ಕಿದರೆ ಅಷ್ಟೇ ಕತೆಗಾರನ ಭಾಗ್ಯ ಎಂಬ ಔದಾರ್ಯದಿಂದ ನೀವು ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಟ್ಟಿದ್ದೀರಿ. ಈ ಮುಕ್ತತೆಯೇ ನಿಮ್ಮ ಕತೆಗಳ ಶಕ್ತಿ. ಅದು ನಿಮ್ಮ ವ್ಯಕ್ತಿತ್ವದಲ್ಲಿರುವ ಗುಣವೂ ಹೌದು.
"ಹರಿವ ತೊರೆಯ ಲಹರಿ"ಯ ಪಂಚಮನ ಅವ್ಯಕ್ತ ಪ್ರೇಮ, "ಸಂಸಾರ ಬಂಧನಾತ್" ಕತೆಯ ಚಾರ್ವಿ, ಊರ್ಮಿ ಮತ್ತು ಅಲೋಕ ನಡುವಣ ಘಟನೆ ಮತ್ತು ವಿಘಟನೆ, "ಕಿ" ಮತ್ತು "ಕ" ಪಾತ್ರಗಳ ಮಾತುಕತೆಯಲ್ಲೇ ಹುಟ್ಟುವ ಅಧ್ಯಾತ್ಮ, ಚಂದ್ರಹಾಸನ ಬದುಕಿನ ಅನ್ಯಮನಸ್ಕತೆ, "ಚಂಡೆ"ಯ ಲಯದಲ್ಲಿ ತನ್ನನ್ನು ನೀಗಿಕೊಳ್ಳುವ ಶಾಲಿನಿ, "ನಂಬಿದ ದೈವ"ದ ಸತ್ಯಕತೆ- ಹೀಗೆ ಕತೆಗಳ ವೈವಿಧ್ಯ ಗಮನ ಸೆಳೆಯುವಂತಿದೆ. "ಕಾಗೆ ಮತ್ತು ಕಡ್ಲೆಬೇಳೆ ಪಾಯಸ" ಕತೆಯಂತೂ ಸಾಂಕೇತಿಕತೆಯನ್ನು ಮೈವೆತ್ತಂತೆ ಮೂಡಿ ಬಂದಿದೆ. ಅಂಥ ಕತೆಯೊಂದನ್ನು ನಿಮಗೆ ಬರೆಯಲು ಸಾಧ್ಯವಾಯಿತಲ್ಲ ಎಂಬ ಹೊಟ್ಟೆಕಿಚ್ಚಿನೊಂದಿಗೇ ನಿಮಗೆ ಅಭಿನಂದನೆ ಹೇಳುತ್ತಿದ್ದೇನೆ.
- ಜೋಗಿ
|
ಕನ್ನಡಕ್ಕೂ ಕರ್ನಾಟಕಕ್ಕೂ ಬೇಕಿದ್ದೂ ಬೇಡವಾದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದಲ್ಲಿ ಹುಟ್ಟಿ ಬೆಳೆದು, ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕೇರಳದಲ್ಲಿ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಾಹಿತ್ಯ, ಸಂಗೀತ, ಯಕ್ಷಗಾನ, ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಕತೆ-ಲೇಖನ-ಕವನ-ಪ್ರವಾಸಿ ಲೇಖನಗಳು ಪ್ರಕಟಗೊಂಡಿವೆ. "ಜಿಡ್ಡು ಕೃಷ್ಣಮೂರ್ತಿ"ಯವರ ಕುರಿತಾದ ಪುಸ್ತಕ ಮತ್ತು ಅವರ ಇಂಗ್ಲಿಷ್ ಬರಹಗಳ ಕನ್ನಡ ತರ್ಜುಮೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. ಪ್ರಸ್ತುತ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
|
|
| |
|
|
|
|
|
|
|
|
|