|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡತಿ ಕಮಲಾದೇವಿ ಧಾರೇಶ್ವರ್ ಬಂಗಾಳದ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರನ್ನು ಮದುವೆಯಾಗಿ ಕಮಲಾದೇವಿ ಚಟ್ಟೋಪಾಧ್ಯಾಯ ಆಗಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದರ ಜೊತೆಗೆ, ದೇಶ ವಿಭಜನೆಯ ನಂತರ ವಲಸೆ ಬಂದ ಜನರಿಗೆ ಅದ್ಭುತ ಪುನರ್ವಸತಿಯನ್ನು ರೂಪಿಸಿ ನೆಹರು ಅವರಿಂದ ಭೇಷ್ ಎಂದೆನಿಸಿಕೊಂಡ ಅಪರೂಪದ ಮಹಿಳೆ. ಗಂಡು ಹೆಣ್ಣಿನ ಸಮಾನತೆಯನ್ನು ಎತ್ತಿ ಹಿಡಿದ ಕಮಲಾ ಅವರು ಮಹಿಳಾ ಕಾರ್ಮಿಕ ಸಂಘಟನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ಸಂಘಟಿಸಿದರು. ಕರಕುಶಲ ಮಂಡಳಿಯ ಅಧ್ಯಕ್ಷರಾಗಿ ಬಾಂಕುರ್ ಗೊಡೆ, ಕಲಂಕಾರಿ, ಪೈಠಣಿ ಸೀರೆ, ಪೋಚಂಪಲ್ಲಿ ಸೀರೆ, ಪಶ್ಚಿಮಿನ್ ಶಾಲುಗಳು ದೇಶವಿದೇಶಗಳನ್ನು ತಲುಪಲು ಕಾರಣರಾಗುತ್ತಾರೆ. ಚಂಬಾ ಮಹಿಳೆಯರ ಕೌಶಲ್ಯ, ಕರ್ನಾಟಕದ ಗೊಂಬೆಯಾಟ, ತಮಿಳುನಾಡಿನ ಶಿಲ್ಪಕಲೆ, ಜೈಪುರದ ಪಿಂಗಾಣಿ ಮುಂತಾದ ಹಸ್ತಕಲೆಗಳಿಗೆ ನೆರವನ್ನು ನೀಡಿ ಗುಡಿಕೈಗಾರಿಕೆಗೆ ಭದ್ರವಾದ ಬುನಾದಿಯನ್ನು ಹಾಕುತ್ತಾರೆ. ಬೆಂಗಳೂರಿನಲ್ಲಿ ‘ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಾಫಿ‘ಯನ್ನು ಸ್ಥಾಪಿಸುತ್ತಾರೆ. ಬಹುಮುಖ ಪ್ರತಿಭೆಯ ಮಹಾನ್ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ!
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|