
| Rs. 320 | 10% |
Rs. 288/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಾಗರ್ ಪ್ರಕಾಶನ, Sagar Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2009 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
572 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
156828 |
ಈ ಸಂಕಲನದಲ್ಲಿರುವ ಐವತ್ತು ಕತೆಗಳೂ ಬೇರೆ ಬೇರೆ ಬಗೆಯವು. ವಸ್ತುವಿನಲ್ಲಿ, ನಿರೂಪಣಾ ವಿಧಾನದಲ್ಲಿ, ಪಾತ್ರ ಸೃಷ್ಟಿಯಲ್ಲಿ, ಒಟ್ಟಾರೆ ಆಶಯದಲ್ಲಿ ಒಂದೊಂದು ಕತೆಯೂ ವಿಭಿನ್ನ. ಆದರೆ ಇವನ್ನೆಲ್ಲ ಇಲ್ಲಿ ಒಟ್ಟಿಗೆ ತಂದಿರುವುದಕ್ಕೆ ಕಾರಣ ಒಂದೇ. ಈ ಎಲ್ಲ ಕತೆಗಳನ್ನೂ ಬರೆದಿರುವ ಲೇಖಕರು ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದವರು. ನೊಬೆಲ್ ಪ್ರಶಸ್ತಿ ವಿಜೇತರು ಬರೆದಿರುವ ಸಣ್ಣಕತೆಗಳ ಪ್ರಾತಿನಿಧಿಕ ಸಂಕಲನ ಇದು. ಸಾಹಿತ್ಯದ ಈ ಪ್ರಕಾರ ಕಾಲಕಾಲಕ್ಕೆ ಬದಲಾಗುತ್ತಾ, ಮನುಷ್ಯಲೋಕದ ಕಲಾತ್ಮಕ ಅಭಿವ್ಯಕ್ತಿಗಾಗಿ ತುಡಿಯುತ್ತಾ ಹೇಗೆಲ್ಲ ಪರಿಪೂರ್ಣತೆಯನ್ನು ಸಾಧಿಸಿದೆಯೆಂಬುದಕ್ಕೆ ಇಲ್ಲಿ ಬಹಳಷ್ಟು ಉದಾಹರಣೆಗಳು ದೊರೆಯುತ್ತವೆ. ವಾಸ್ತವವಾದ, ನೈಸರ್ಗಿಕವಾದ, ಪ್ರತೀಕವಾದ, ಐಂದ್ರಜಾಲಿಕ ವಾಸ್ತವವಾದ, ಅದ್ಭುತ ರಮ್ಯ ಎಂದೆಲ್ಲ ವಿಮರ್ಶಕರು ಗುರುತಿಸುವ ಸಾಹಿತ್ಯಮಾರ್ಗಗಳ ಕಥೆಗಳು ಇಲ್ಲಿವೆ. ದೇಶ, ಭಾಷೆ, ಪರಿಸರ, ಆಶಯ ಬೇರೆ ಬೇರೆ ಇರಬಹುದು, ಆದರೆ ಕಥೆಗಳ ಉದ್ದಕ್ಕೂ ಕೇಳಿಸುವ ಧ್ವನಿ ಒಂದೇ: ಮನುಷ್ಯ ಧ್ವನಿ-ನಮ್ಮ ನಿಮ್ಮೆಲ್ಲರ ಧ್ವನಿ.
|
ಎಸ್. ದಿವಾಕರ್ ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ದೇವನಹಳ್ಳಿಯಲ್ಲಿ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ. ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಸಂಯುಕ್ತ ಕರ್ನಾಟಕ, ಮಲ್ಲಿಗೆ, ಸುಧಾ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಕೆಲಸಮಾಡಿದವರು; ೧೯೮೯ರಿಂದ ೨೦೦೫ರವರೆಗೆ ಚೆನ್ನೈಯಲ್ಲಿರುವ ಅಮೆರಿಕನ್ ಕಾನ್ಸುಲೇಟ್ನಲ್ಲಿ ಸಂಪಾದಕರಾಗಿದ್ದವರು. ಸದ್ಯ ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆಯಲ್ಲಿ ಸಾಹಿತ್ಯ ಸಲಹೆಗಾರರು. ಸಣ್ಣಕತೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಅಂಕಣ ಬರಹ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಅವರು ೨೦೦೨ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯ ವರ್ಷವರ್ಷವೂ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ದಿವಾಕರ್ ಪಡೆದಿರುವ ಅನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಸೀನಿಯರ್ ಫೆಲೋಶಿಪ್, ರೈಟರ್-ಇನ್-ರೆಸಿಡೆನ್ಸ್, ಅಯೋವಾ ವಿಶ್ವವಿದ್ಯಾಲಯ, ಯು.ಎಸ್.ಎ., ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಕಥಾ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೋಲ್ಕತಾದ ಅಖಿಲ ಭಾರತ ಹಿಂದೀ ಪುರಸ್ಕಾರ್ ಮುಖ್ಯವಾದುವು.
|
|
| |
|
|
|
|