|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೨೦೦೮ರಲ್ಲಿ ತಮ್ಮ "ಅರಮನೆ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಕುಂ. ವೀರಭದ್ರಪ್ಪ ಅವರು ಕರ್ನಾಟಕದ ಪ್ರತಿಷ್ಠಿತ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಥೆ ಮತ್ತು ಕಾದಂಬರಿ ಪ್ರಕಾರಗಳನ್ನೇ ತಮ್ಮ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮದವನ್ನಾಗಿ ಆಯ್ದುಕೊಂಡವರು ತಮ್ಮ ಸಾಧನಾ-ಸರಣಿಗಳಿಂದ ಕನ್ನಡ ಕಾದಂಬರಿ ಪ್ರಕಾರಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಲೇಖಕರಾಗಿ ಸ್ತುತ್ಯರೂ, ಅಭಿನಂದನೀಯರೂ ಆಗಿದ್ದಾರೆ. ’ಸಂದೇಶ ಪ್ರಶಸ್ತಿ’, ’ವರ್ಧಮಾನ ಪ್ರಶಸ್ತಿ’, ’ಉಗ್ರಾಣ ಪ್ರಶಸ್ತಿ’, ’ಚದುರಂಗ ಪ್ರಶಸ್ತಿ’, ’ನೃಪತುಂಗ ಪ್ರಶಸ್ತಿ’ - ಮೋದಲಾದ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂಗಳಿಸಿದ್ದಾರ.
|
ಲೋಕೇಶ ಅಗಸನಕಟ್ಟೆಯವರು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಾವ್ಯ, ಕಥೆ, ನಾಟಕ, ಪ್ರವಾಸಕಥನ ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ಕೊಡುಗೆಗಳನ್ನು ನೀಡುತ್ತ ಬಂದಿರುವ ಅವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಹಾಗೂ ವಿಮರ್ಶಕರಾಗಿಯೂ ವಿದ್ವತ್ಲೋಕದ ಗಮನವನ್ನು ಸೆಳೆದಿದ್ದಾರೆ. ಕನಾರ್ಟಕ ಸಾಹಿತ್ಯ ಅಕಾಡಿಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಜೆ ಮಂಗೇಶರಾವ್ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
|
|
| |
|
|
|
|
|
|
|
|
|