|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೂಯಿ ಪಾಶ್ಚರ್ ಸಾರ್ವಜನಿಕರ ಸಮ್ಮುಖದಲ್ಲಿ ಒಂದು ದಿಟ್ಟ ಪ್ರಯೋಗವನ್ನು ಕೈಗೊಂಡನು. ಪಾಲಿ-ಲೆ-ಪೋರ್ಟ್ ಎಂಬ ಸ್ಥಳ. ಹಸು, ಕುರಿ ಮೇಕೆಗಳಿದ್ದ ಎರಡು ಗುಂಪುಗಳನ್ನು ರೂಪಿಸಿದನು. ಮೊದಲ ಗುಂಪಿನ ಪ್ರಾಣಿಗಳಿಗೆ ನೆರಡಿ ರೋಗವನ್ನುಂಟುಮಾಡುವ ‘ಬ್ಯಾಸಿಲ್ಲಸ್ ಆಂಥ್ರಸಿಸ್‘ ಬ್ಯಾಕ್ಟೀರಿಯವನ್ನು 42-43 ಡಿಗ್ರಿ ಉಷ್ಣತೆಯಲ್ಲಿ ಕಾಯಿಸಿ, ಅವುಗಳನ್ನು ಶಕ್ತಿಗುಂದಿಸಿದನು. 15 ದಿನಗಳ ಅಂತರದಲ್ಲಿ ಎರಡು ಸಲ ಈ ಶಕ್ತಿಗುಂದಿದ ಬ್ಯಾಕ್ಟೀರಿಯಗಳಿದ್ದ ದ್ರಾವಣವನ್ನು ಇಂಜಕ್ಷನ್ ಮೂಲಕ ಚುಚ್ಚಿದನು. ಶಕ್ತಿಗುಂದಿದ ಬ್ಯಾಕ್ಟೀರಿಯವಿದ್ದ ದ್ರಾವಣವನ್ನು ‘ವ್ಯಾಕ್ಸೀನ್‘ ಎಂದು ಕರೆದನು. ವ್ಯಾಕ್ಸೀನ್ ನೀಡುವಿಕೆಯನ್ನು ‘ವ್ಯಾಕ್ಸಿನೇಶನ್‘ ಎಂದು ಕರೆದನು. ಮೊದಲ ವ್ಯಾಕ್ಸಿನೇಶನ್ ನೀಡಿದ 30 ದಿನಗಳ ನಂತರ ಎರಡೂ ಗುಂಪಿನ ಪ್ರಾಣಿಗಳಿಗೆ ಅತ್ಯಂತ ತೀಕ್ಷ್ಣವಾದ ಆಂಥ್ರಾಕ್ಸ್ ಬ್ಯಾಕ್ಟೀರಿಯಗಳನ್ನು ಚುಚ್ಚಿದನು. ವ್ಯಾಕ್ಸಿನೇಶನ್ ಪಡೆದ ಮೊದಲ ಗುಂಪಿನ ಪ್ರಾಣಿಗಳೆಲ್ಲವೂ ಬದುಕಿದವು. ಆದರೆ ವ್ಯಾಕ್ಸಿನೇಶನ್ ಪಡೆಯದ ಎರಡನೆಯ ಗುಂಪಿನ ಪ್ರಾಣಿಗಳೆಲ್ಲ ಸತ್ತವು! ಈ ಯಶಸ್ವೀ ಪ್ರಯೋಗದಿಂದ ವ್ಯಾಕ್ಸೀನುಗಳ ಅದ್ಭುತ ವಿಜ್ಞಾನ ಪ್ರವರ್ಧಮಾನಕ್ಕೆ ಬಂದಿತು!
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|