
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಪದ್ಯ ಬರೆಯುವವರಿಗೆ ಹುಚ್ಚು ಹಿಡಿಯುತ್ತದೆ‘ ಎಂದು ಮುಗ್ಧಳಾಗಿ ನಂಬಿಕೊಂಡಿದ್ದ ತಮ್ಮ ತಾಯಿಯ ಭಯ ಹೋಗಲಾಡಿಸಿ ಪದ್ಯಗಳನ್ನು ಬರೆದವರು ಗೋವಿಂದ ಪೈ. ಪ್ರಾಸಗಳ ತ್ರಾಸದಲ್ಲಿ ಬಳಲಿದ್ದ ಪದ್ಯ ರಚನೆಯನ್ನು ಮುಕ್ತಗೊಳಿಸಿದವರಲ್ಲಿ ಆದ್ಯರು. ಭಾರತದ ರಾಷ್ಟ್ರಪತಿಯಾಗಿದ್ದ ಡಾ|| ಎಸ್. ರಾಧಾಕೃಷ್ಣನ್ ಇವರ ಸಹಪಾಠಿಯಾಗಿದ್ದರು. ಇಂಗ್ಲಿಷ್ ಭಾಷೆಯಲ್ಲಿ ರಾಧಾಕೃಷ್ಣನ್ ಅವರನ್ನು ಮೀರಿಸಿದವರು. ‘ತಾನು ಮೇಲೆಂದುಬ್ಬಿ ಹೀನೈಸಿದವನೆ ಹೊಲೆಯ‘ ಎಂದು ದಿಟ್ಟವಾಗಿ ಹಾಡಿದರು. ಪದ್ಯ-ಗದ್ಯಗಳನ್ನು ಎಂದಿಗೂ ‘ಸ್ವಾಂತಃ ಸುಖಾಯ‘ಕ್ಕಾಗಿ, ಆತ್ಮತೃಪ್ತಿಗಾಗಿ ಬರೆದರು. ತಾವು ಬರೆಯುವುದನ್ನು ಪ್ರಕಟ ಮಾಡುವ ಉತ್ಸಾಹ ಅವರಿಗೆ ಎಂದೂ ಇರಲಿಲ್ಲ. ಕನ್ನಡ, ಕೊಂಕಣಿ, ಗುಜರಾತಿ, ತುಳು, ಮರಾಠಿ, ಮಲಯಾಳಂ, ಸಂಸ್ಕೃತ, ಅರ್ಧಮಾಗಧಿ, ತಮಿಳು, ತೆಲುಗು, ಹಿಂದಿ, ಉರ್ದು, ಬಂಗಾಳಿ, ಒರಿಯ, ಪ್ರಾಕೃತ, ಪಾಳಿ, ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಇಟಾಲಿಯನ್, ಪರ್ಷಿಯನ್ ಹಾಗೂ ಜಪಾನಿ ಭಾಷೆಗಳನ್ನು ಬಲ್ಲ ಅಪರೂಪದ ಕನ್ನಡ ವಿದ್ವಾಂಸರಾಗಿದ್ದರು!
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|