|
|

 | Rs. 110 | 10% |
Rs. 99/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಜ್ಞಾನದ ವಿಷಯಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾಗಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವಲ್ಲಿ ಈ ಪುಸ್ತಕ ಸಹಾಯಕ. ವಿಜ್ಞಾನದ ಪಾಠಗಳು ತುಂಬ ಕ್ಲಿಷ್ಟವಾಗಿದ್ದು ಪ್ರತ್ಯಕ್ಷ ಚಟುವಟಿಕೆ ಹಾಗೂ ಪ್ರಯೋಗಗಳ ಮೂಲಕ ಮಾತ್ರವೇ ಸಂಪೂರ್ಣ ಜ್ಞಾನ ಲಭ್ಯವಾಗುವುದು. ಕೇವಲ ಕಂಠಪಾಠ ಮಾಡಿಕೊಂಡು ಪರೀಕ್ಷೆಗೆ ತಯಾರಾಗುವುದು ಮತ್ತು ಪರೀಕ್ಷೆಯ ಅಂಕಗಳಿಗಾಗಿ ಅರ್ಧಂಬರ್ಧ ಜ್ಞಾನ ಗಳಿಸುವುದು ಮುಂದೆ ವೃತ್ತಿಜೀವನದಲ್ಲಿ ತೊಡಗಿದಾಗ ತೊಡಕಾಗಬಹುದು. ಹಾಗಾಗಿ ಇಂದಿನ ವಿದ್ಯಾರ್ಥಿಗೆ ವಿಷಯದ ಜ್ಞಾನ ಆಳವಾಗಿರಬೇಕಾದ್ದು ಅತೀ ಅವಶ್ಯ. ಈ ದೃಷ್ಟಿಯಿಂದ ನವಕರ್ನಾಟಕ ಪ್ರಕಾಶಾನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು “ವಿಜ್ಞಾನ ಸರಳ ಪರಿಚಯ ಮಾಲೆ” ಎಂಬ ಇಪ್ಪತ್ತೇಳು ಪುಸ್ತಕಗಳನ್ನು ವಿಷಯ ತಜ್ಞರಿಂದ ಬರೆಯಿಸಿ ಚಿತ್ರಗಳ ಸಹಿತ ಪ್ರಕಟಿಸಿದೆ. ಸರಳ ವಾಕ್ಯಗಳು-ಆಕರ್ಷಕ ಶೈಲಿಯಿಂದ ಅಚ್ಚುಕಟ್ಟಾಗಿ ಸುಲಭಗ್ರಾಹ್ಯವಾಗಿವೆ. ಅವುಗಳಲ್ಲೊಂದು - ರೋಗಗಳು ಮತ್ತು ಚಿಕಿತ್ಸೆ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|