|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾವಿತ್ರಿಬಾಯಿ ಫುಲೆ, ಬ್ರಿಟಿಷ್ ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಥಮ ಮಹಿಳೆ. ದಲಿತ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆಯುತ್ತಾರೆ. ಮೊದಲ ಅಧ್ಯಾಪಕಿಯಾಗುತ್ತಾರೆ. ಅವಮಾನ ಹಾಗೂ ಹಲ್ಲೆಗಳು ಅವರನ್ನು ಧೃತಿಗೆಡಿಸವು. ಬಾಲವಿಧವೆಯರಿಗೆ ಇದ್ದದ್ದೇ ಎರಡು ಮಾರ್ಗ. ಸತಿಯಾಗಬೇಕು ಇಲ್ಲವೇ ತಲೆ ಬೋಳಿಸಿಕೊಳ್ಳಬೇಕು. ಇಂತಹ ಹೆಣ್ಣುಮಕ್ಕಳ ದೌರ್ಜನ್ಯಕ್ಕೆ ತುತ್ತಾಗಿ ಗರ್ಭವತಿಯರಾದ ಬಾಲಕಿಯರಿಗೆ ಅಂದು ಆತ್ಮಹತ್ಯೆಯೊಂದೇ ದಾರಿ! ಅಂತಹ ಮಕ್ಕಳನ್ನು ಗುರುತಿಸಿ ಸುಸೂತ್ರ ಹೆರಿಗೆ ಮಾಡಿಸಿ ಆಶ್ರಯ ನೀಡುತ್ತಾರೆ. ರೋಗಿಗಳಿಗಾಗಿ ಆಸ್ಪತ್ರೆಯನ್ನು ಕಟ್ಟಿ, ಅವರ ಸೋಂಕನ್ನು ಗುಣಪಡಿಸುವಾಗ ತಾನೇ ಸೋಂಕಿಗೆ ತುತ್ತಾಗಿ ಮರಣವನ್ನಪ್ಪುತ್ತಾರೆ! ಭಾರತೀಯ ಇತಿಹಾಸ ಕಂಡ ಅಸದೃಶ ಮಹಿಳೆ ಸಾವಿತ್ರಿ ಬಾಯಿ ಫುಲೆ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|