|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಶ್ರೀಕಾಂತ್, Srikanth |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
1120 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
187039 |
ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ್ಲಿ ಮಾತ್ರ ಶಕ್ಯವಾಗುವಂಥದು. ಶ್ರೀ ಶ್ರೀಕಾಂತನ್ ಅವರು ಈ ಕಾರ್ಯಕ್ಕೆ ತಮ್ಮನ್ನು ನಾಲ್ಕಾರು ವರ್ಷಗಳಿಂದ ಸಜ್ಜುಗೊಳಿಸಿಕೊಂಡಿರುವುದು ಈ ಗ್ರಂಥದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ವಿಷಯದಲ್ಲಿ ಅಸೀಮ ಪ್ರೀತಿ ಇದ್ದಲ್ಲಿ ಮಾತ್ರ ಇಂತಹ ಕ್ಲೇಶಪೂರ್ಣ ಕಾರ್ಯಕ್ಕೆ ಪ್ರೇರಣೆ ದೊರೆತೀತು. ಅರ್ಥವಿಶೇಷಗಳನ್ನು ಸ್ಪಷ್ಟೀಕರಿಸುವಲ್ಲಿ ಶ್ರೀ ಶೀಕಾಂತನ್ ಅಲ್ಲಲ್ಲಿ ವಿವಿಧ ಗ್ರಂಥಾಂತರಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಹೀಗೆ ಇದೊಂದು ಉಚ್ಚಕೋಟಿಯ ಸಂಶೋಧನಗ್ರಂಥವೇ ಆಗಿದೆ. ಡಿ.ವಿ.ಜಿ. ವಾಙಯಕ್ಕೆ ಈ ಮಟ್ಟದ ಮತ್ತು ಇಷ್ಟು ಸಾರ್ಥಕವಾದ ಕೈಂಕರ್ಯ ಇದುವರೆಗೆ ಸಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು.
ಕಗ್ಗದ್ವಯದ ಬಗೆಗೆ ಶ್ರೀ ಶ್ರೀಕಾಂತನ್ ಬೆಳೆಸಿಕೊಂಡಿರುವ ತಪಃದೃಶ ನಿಷ್ಠೆಗೆ ಇದೀಗ ಹೊರಬರುತ್ತಿರುವ ಅವರ ‘ಶ್ರೀಮದ್ಭಗವದ್ಗೀತೆ ಮತ್ತು ಕಗ್ಗ ತಾತ್ಪರ್ಯ’ ಮುಕುಟಪ್ರಾಯವಾಗಿದೆ. ‘ಕಗ್ಗ’-ಆಸಕ್ತರಿಗೆಲ್ಲ ಅನುಪಮವಾದ ದೊಡ್ಡ ನಿಧಿಯನ್ನೇ ಈ ವ್ಯಾಖ್ಯಾನದಲ್ಲಿ ಶ್ರೀ ಶ್ರೀಕಾಂತನ್ ಒದಗಿಸಿದ್ದಾರೆ. ಡಿ.ವಿ.ಜಿ. ವಾಙಯ ಪರಾಮರ್ಶನ ಸಾಹಿತ್ಯಕ್ಕೆ ಇದು ಕಲಶೋಪಮವಾಗಿದೆ.
|
| |
|
|
|
|
|
|
|
|
|