|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ|| ಯು. ಆರ್. ಅನಂತಮೂರ್ತಿಯವರು ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ, ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ, ಸಂಸ್ಕೃತಾಭ್ಯಾಸವನ್ನು ಮಾಡುತ್ತಾ ಬೆಳೆದ ಅನಂತಮೂರ್ತಿ ಇಂಗ್ಲಿಷ್ ಪೆÇ್ರಫೆಸರ್ ಆಗಿ ಕೆಲಸ ಮಾಡಿದರೂ ಬರೆದದ್ದೆಲ್ಲ ಕನ್ನಡದಲ್ಲಿ. ಆಧುನಿಕ ಯುವಪೀಳಿಗೆಯ ಒಂದು ಹೊಸ ತಲೆಮಾರನ್ನು ಪ್ರಭಾವಿತಗೊಳಿಸಿದ್ದು ಅವರ ಹೆಗ್ಗಳಿಕೆ. "ಕನ್ನಡಿಗರಿಗೆ ಮೂರು ರೀತಿಯ ಹಸಿವುಗಳಿರಬೇಕು. ಮೊದಲನೆಯದು ಸಮಾನತೆಯ ಹಸಿವು. ಹಿಂದುಳಿದ ವರ್ಗ, ದಲಿತವರ್ಗ ಹಾಗೂ ಸ್ತ್ರೀಯರಿಗೆ ಸಮಾನತೆ ದೊರೆಯಬೇಕು. ಎರಡನೆಯದು ಆಧ್ಯಾತ್ಮಿಕ ಹಸಿವು. ವಚನಕಾರರಿಂದ ಹಿಡಿದು ಬೇಂದ್ರೆ-ಕುವೆಂಪುವರೆಗಿನ ಕವಿಗಳು ಮತೀಯತೆಯನ್ನು ಮೀರಿ ಬೆಳೆದರು ಹಾಗೂ ಬರೆದರು. ಮೂರನೆಯ ಹಸಿವು ಆಧುನಿಕತೆಯ ಹಸಿವು. ಸಾಂಪ್ರದಾಯಿಕ ಮಾರ್ಗದಲ್ಲಿದ್ದ ಕನ್ನಡ ಸಾಹಿತ್ಯಕ್ಕೆ ತಮ್ಮ ಇಂಗ್ಲಿಷ್ ಗೀತೆಗಳ ಮೂಲಕ ಆಧುನಿಕತೆಯ ಸ್ಪರ್ಶವನ್ನು ಬಿ.ಎಂ.ಶ್ರೀಯವರು ನೀಡಿದರು. ಈ ಮೂರು ಹಸಿವುಗಳು ಇಂದು ಕನ್ನಡಿಗರ ಮನಸ್ಸನ್ನು ಅರಳಿಸಬೇಕಿದೆ ಹಾಗೂ ಅವರ ಬಾಳನ್ನು ಬೆಳಗಿಸಬೇಕಿದೆ. ಈ ಕೆಲಸವನ್ನು ಇಂಗ್ಲಿಷಾಗಲಿ, ಹಿಂದಿಯಾಗಲಿ ಹಾಗೂ ಸಂಸ್ಕೃತವಾಗಲಿ ಮಾಡಲಾಗದು" ... ಅನಂತಮೂರ್ತಿಯವರ ವಿಚಾರ ಮನನೀಯ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|